ADVERTISEMENT

ಅನಗತ್ಯ ಅಡ್ಡಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST

ಮುಚ್ಚೇ ಹೋದಂತಿರುವ ಲೋಕಾಯುಕ್ತದ ಬಾಗಿಲನ್ನು ತೆರೆಸಲು, ಜನರ ಅಸಮಾಧಾನ ಹಾಗೂ ಒತ್ತಡಗಳಿಗೆ ಮಣಿದು ಸರ್ಕಾರ ಲೋಕಾಯುಕ್ತ ಹುದ್ದೆಗೆ  ಸರ್ವಾನುಮತದಿಂದ ಒಬ್ಬರ ಹೆಸರು ಶಿಫಾರಸು ಮಾಡಿತು ಎನ್ನುವಾಗ, ಅವರ ಬಗೆಗಿನ ಹಳೆಯ ದಾಖಲೆಗಳು ಮುನ್ನೆಲೆಗೆ ಬಂದು ನೇಮಕಕ್ಕೆ ಅಡ್ಡಿ ಉಂಟಾಗುತ್ತಿದೆ.

ಯಾವೊಂದು ಕಳಂಕವೂ ಇಲ್ಲದ ವ್ಯಕ್ತಿಯನ್ನು ಸಾರ್ವಜನಿಕ ಬದುಕಿನಲ್ಲಿ ಹುಡುಕಲು ಸಾಧ್ಯವೇ? ಹಿಂದಿನ ದೋಷಗಳನ್ನೇ ದೊಡ್ಡದು ಮಾಡಿ ಲೋಕಾಯುಕ್ತ ನೇಮಕ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವ ಬದಲು, ಹೊಸ ಲೋಕಾಯುಕ್ತರ ಕಾರ್ಯವೈಖರಿ ಮೇಲೆ ಹದ್ದಿನ ಕಣ್ಣಿಟ್ಟು, ಅನ್ಯಾಯ ನಡೆಯದಂತೆ ನೋಡಿಕೊಳ್ಳುವುದು ನಿಜವಾದ ಜನಪರ ಕಾರ್ಯ.
-ಸತ್ಯಬೋಧ,  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.