ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಾವಳಿಗೆ ಅನುಗುಣವಾಗಿ ನೌಕರರು ತಾವು ಮಾಡಿರುವ ಸಾಲ, ಗಳಿಸಿರುವ ಸಂಪತ್ತು ಕುರಿತು ವಿವರವಾದ ಮಾಹಿತಿಯನ್ನು ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಿರುತ್ತದೆ. ‘ಡಿ’ ದರ್ಜೆ ನೌಕರರು ಪ್ರಾಮಾಣಿಕರು ಆಥವಾ ಅವರಿಗೆ ನೀತಿ ನಿರೂಪಣೆಯಲ್ಲಿ ಗಣನೀಯ ಪಾತ್ರವಿಲ್ಲ ಎಂಬ ಕಾರಣಕ್ಕೋ ಏನೋ ಈ ನೌಕರರು ತಮ್ಮ ವಾರ್ಷಿಕ ವರದಿ ಸಲ್ಲಿಸುವುದರಿಂದ ಇದುವರೆಗೆ ವಿನಾಯಿತಿ ನೀಡಲಾಗಿದೆ.
ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಲೋಕಾಯುಕ್ತ ದಾಳಿಗಳಲ್ಲಿ ‘ಡಿ’ ದರ್ಜೆಯ ಕೆಲ ನೌಕರರು ಅಧಿಕಾರಿಗಳಿಗಿಂತಲೂ ಹೆಚ್ಚು ಸಂಪತ್ತು ಹೊಂದಿರುವ ಸತ್ಯ ಹೊರಬಂದಿದೆ. ಕೆಲವರಂತೂ ಮಾಸಿಕ ₨ ೨೦-–೩೦ ಸಾವಿರ ಸಂಬಳ ಪಡೆದರೂ ₨ 2–3 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಈ ಕಾರಣ ಮುಂದಿನ ದಿನಗಳಲ್ಲಿ ‘ಡಿ’ ದರ್ಜೆ ನೌಕರರೂ ವಾರ್ಷಿಕ ಆಸ್ತಿ ವಿವರ ಕಡ್ಡಾಯವಾಗಿ ಸಲ್ಲಿಸಲು ನೆರವಾಗುವಂತೆ ಸರ್ಕಾರ ನಿಯಮಾವಳಿಗಳಲ್ಲಿ ತಿದ್ದುಪಡಿ ತರಲಿ.
–ಡಾ.ಚನ್ನು ಅ. ಹಿರೇಮಠ, ರಾಣೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.