ADVERTISEMENT

ಓದಿ ನೋಡಿ...

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST

ಉತ್ತರ ಪ್ರದೇಶದ
ಉತ್ತರಾಧಿಕಾರಕ್ಕಾಗಿ
ಉತ್ತರ-ದಕ್ಷಿಣವಾಗಿ,
ರಾಜ್ಯ ತತ್ತರಿಸುತ್ತಿದ್ದರೂ
ಉತ್ತರ ಮಾತ್ರ ಸಿಗುತ್ತಿಲ್ಲ
ಎಂಬ ಭ್ರಮೆಯಲ್ಲಿ,
ನಿಮ್ಮೆತ್ತರವ ಮರೆತು
ಕಚ್ಚಾಡುತ್ತಿರುವ ಅಪ್ಪ-ಮಕ್ಕಳೇ,
ನಿಮ್ಮಂತಹವರು ಹುಟ್ಟುತ್ತಾರೆಂದು
ಊಹಿಸಿ, ನಮ್ಮ ಪಂಪ ಮಹಾಕವಿಯು
ಆದಿಪುರಾಣದಲ್ಲಿ
‘ರಾಜ್ಯ ವ್ಯಾಮೋಹವು ತಂದೆ ಮಕ್ಕಳಲ್ಲಿ,  
ಸಹೋದರರಲ್ಲಿ ವಿರಸವನ್ನುಂಟು
ಮಾಡುತ್ತದೆ’ ಎಂದು ಸಾವಿರ ವರ್ಷಗಳ
ಹಿಂದೆಯೇ ಬರೆದಿದ್ದಾನೆ,
ಉತ್ತರ ಸಿಗಬಹುದು
ಒಮ್ಮೆ ಓದಿ ನೋಡಿ.
–ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.