ಭಾಷಾ ಮಾಧ್ಯಮ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ಆತಂಕ ಮೂಡಿಸಿದೆ. ಕರ್ನಾಟಕ ಸರ್ಕಾರ, ಕನ್ನಡ ಸರ್ಕಾರವಾಗಿ ಉಳಿದಿಲ್ಲ. ಕನ್ನಡಪರ ಸಂಘಟನೆಗಳು ಯಾಕೋ ಬಾಯಿ ಬಿಡುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾರು ಬಾಯಿ ಹೊಲಿದಿದ್ದಾರೊ ಗೊತ್ತಿಲ್ಲ. ಕನ್ನಡವನ್ನು ಕಾಯುವವರಾರು?
ಸರ್ಕಾರದ ಮಟ್ಟದಲ್ಲಿ ಸಂಪುಟ ವಿಸ್ತರಣೆ, ನಿಗಮ, ಮಂಡಳಿಗಳಿಗೆ ನೇಮಕ ಸಂಬಂಧ ತೋರಿಸುತ್ತಿರುವ ಆಸಕ್ತಿ, ಮಾಡುತ್ತಿರುವ ಚರ್ಚೆ ಕನ್ನಡದ ಗಂಭೀರ ಸಮಸ್ಯೆಯ ಕುರಿತು ಆಗುತ್ತಿಲ್ಲ. ಸಾಮಾಜಿಕ ಸಮಾನತೆಯೆಡೆಗೆ ಸಾಗುವ ಮಾರ್ಗವಾಗಬೇಕಿದ್ದ ಶಿಕ್ಷಣ ಇಂದು ಹಣ ಗಳಿಸಿಕೊಡುವ ಉದ್ಯಮವಾಗಿದೆ. ಈ ಕ್ಷೇತ್ರದ ನೈತಿಕತೆ ಕುಸಿಯುತ್ತಿದೆ.
ನುಡಿಗೆ ಕಿಡಿ ಬಿದ್ದಿರುವ ಈ ಸಂದರ್ಭದಲ್ಲಿ ಸರ್ಕಾರ, ನಾವು ಆರಿಸಿ ಕಳಿಸಿದ ನಾಯಕರು ಏನು ಮಾಡುತ್ತಿದ್ದಾರೆ? ರಾಷ್ಟ್ರದ ಯಾವುದೇ ಭಾಷೆಗೂ ಕನ್ನಡಕ್ಕೆ ಬಂದಿರುವ ದುಃಸ್ಥಿತಿ ಬಂದಿಲ್ಲ. ಆಳುವವರ ಬದ್ಧತೆ ಕೇವಲ ಅಧಿಕಾರ ಉಳಿಸಿಕೊಳ್ಳು
ವತ್ತಲೇ ಇರುವುದು ನಿಜಕ್ಕೂ ದುರಂತ. ಸರ್ಕಾರ ತಕ್ಷಣ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಕನ್ನಡ ಮಾಧ್ಯಮದ ಬಗ್ಗೆ ಸದೃಢ ನಿಲುವು ತಳೆಯಲಿ.
–ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.