ಕೂಡಲ ಸಂಗಮ ಕ್ಷೇತ್ರದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಸಂಗಮೇಶ್ವರ ಮಂದಿರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕೂಡಲ ಸಂಗಮ ಅಭಿವೃದ್ಧಿ ಮಂಡಳಿ’ ಇದೆಯಾದರೂ ಇಲ್ಲಿ ಕೆಲವು ಸುಧಾರಣೆಗಳು ಆಗಬೇಕಿದೆ.
ಅಸ್ತಿತ್ವದಲ್ಲಿರುವ ಏಳು ಅಂತಸ್ತುಗಳ ವಚನ ಗುಮ್ಮಟವು ಖಾಲಿಯಿದ್ದು ಅಲ್ಲಿ ಕಾಲಕಾಲಕ್ಕೆ ಸಾಂಸ್ಕೃತಿಕ ಉತ್ಸವಗಳು ನಡೆಯುತ್ತಿಲ್ಲ. ಅಡಿಹಾಳ ಗ್ರಾಮದಿಂದ ಸಂಗಮೇಶ್ವರ ಗುಡಿಯವರೆಗೆ ಸಾಗುವ ರಸ್ತೆಯನ್ನು ತಿಪ್ಪೆಗುಂಡಿ ಅತಿಕ್ರಮಿಸಿಕೊಂಡಿದ್ದು ಆ ರಸ್ತೆಯ ಡಾಂಬರೀಕರಣ ಆಗಿಲ್ಲ.
ಸಂಪುಟದ ಅನುಮೋದನೆ ಸಿಕ್ಕರೂ ಸುಮಾರು ₨50 ಕೋಟಿ ಅಂದಾಜಿನ ಮಲಪ್ರಭಾ ಸೇತುವೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಮುದ್ದೇಬಿಹಾಳ ಕಡೆಯಿಂದ ಬರುವ ಯಾತ್ರಾರ್ಥಿಗಳು ಮಳೆಗಾಲದಲ್ಲಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.