ಭಾರತದ ಕ್ರಿಕೆಟ್ ತಂಡದ ಕೋಚ್, ಮಾಜಿ ಆಟಗಾರ ಅನಿಲ್ ಕುಂಬ್ಳೆ ಶುದ್ಧ ಚಾರಿತ್ರ್ಯ, ಶಿಸ್ತು, ಸಮಯಪ್ರಜ್ಞೆಗೆ ಹೆಸರಾದವರು. ಈಗ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕುಂಬ್ಳೆ ವಿರುದ್ಧ ನಿಲುವು ತಳೆದಿರುವುದು ದುರದೃಷ್ಟಕರ.
ಕೊಹ್ಲಿ ಕ್ರೀಡಾಂಗಣದಲ್ಲಿ ಅನೇಕ ಬಾರಿ ನೋಡುವವರಿಗೆ ಬೇಸರ ಅನಿಸುವಷ್ಟು ಸಿಟ್ಟು, ಅಸಮಾಧಾನಗಳ ಆಂಗಿಕ ಭಾವವನ್ನು ಪ್ರಕಟಿಸಿದ್ದಿದೆ. ಇಂಥ ವ್ಯಕ್ತಿ, ಶಿಸ್ತಿನ ಸಿಪಾಯಿಯಾಗಿದ್ದ ಕುಂಬ್ಳೆ ರಾಜೀನಾಮೆಗೆ ಪರೋಕ್ಷವಾಗಿ ಆಡಳಿತ ಮಂಡಳಿ ಮೇಲೆ ಒತ್ತಡ ತಂದಿರುವುದು ಬೇಸರ ಮೂಡಿಸಿದೆ.
-ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.