ಮೈಸೂರು– ಬೆಂಗಳೂರು ಜೋಡಿ ರೈಲು ಮಾರ್ಗ ಈ ವರ್ಷದ ಮಾರ್ಚ್ ವೇಳೆಗೆ ಪೂರ್ಣವಾಗಬೇಕಿತ್ತು. ಅನೇಕ ಕಾರಣಗಳಿಂದ ಈ ಕಾಮಗಾರಿ ವಿಳಂಬವಾಗುತ್ತಲೇ ಇದೆ. ಕಾಮಗಾರಿ ಬಹುಪಾಲು ಮುಗಿದಿದ್ದರೂ ಶ್ರೀರಂಗಪಟ್ಟಣ ಸಮೀಪದ ‘ಮದ್ದು ಅರೆಯುವ ಮನೆ’ಯ ಬಳಿ ಕಾಮಗಾರಿ ನಡೆಯಬೇಕಾಗಿದೆ. ಈ ಮನೆಯನ್ನು ಸ್ಥಳಾಂತರಿಸಬೇಕಾಗಿದೆ.
ಆದಷ್ಟು ಬೇಗನೆ ಈ ಕಾರ್ಯ ಪೂರ್ಣಗೊಳಿಸಿ ರೈಲು ಮಾರ್ಗವನ್ನು ‘ವಿದ್ಯುದೀಕರಣ’ಗೊಳಿಸುವ ಕಾಮಗಾರಿ ಆರಂಭಿಸಬೇಕಾಗಿದೆ. ಮೈಸೂರು – ಬೆಂಗಳೂರು ಜಿಲ್ಲೆಗಳ ಲೋಕಸಭಾ ಸದಸ್ಯರು ರೈಲ್ವೆ ಸಚಿವರನ್ನು ಈ ಕುರಿತು ಒತ್ತಾಯಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಸಹ ಸಹಕರಿಸಬೇಕು.
ಜೆ. ಪುಟ್ಟಸ್ವಾಮಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.