ADVERTISEMENT

ಟ್ರಾಫಿಕ್‌ ಸಮಸ್ಯೆ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST

ಇಂದಿರಾನಗರದಿಂದ ಹಲಸೂರಿಗೆ ಬರುವ ಮಾರ್ಗದಲ್ಲಿ ಪಾದಚಾರಿ ಮಾರ್ಗವೇ ಇಲ್ಲದಾಗಿದೆ. ಇರುವ ಚಿಕ್ಕದಾದ ರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅಂಗಡಿ ಇರಿಸಿಕೊಂಡಿದ್ದಾರೆ.  ಅಂಗಡಿಯ ಸಾಮಾನುಗಳನ್ನು ಪಾದಚಾರಿ ಮಾರ್ಗದ ಮೇಲೆ ಇರಿಸಿಕೊಂಡಿರುತ್ತಾರೆ.

ಇಷ್ಟು ಸಾಲದು ಎಂಬಂತೆ ಅಂಗಡಿಗೆ ಬರುವ ಜನರು ಅಲ್ಲೇ ಸಾಲಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳು ನಡೆದಾಡಲು ಜಾಗವೇ ಇಲ್ಲದಂತಾಗಿದೆ. ವಾಹನಗಳು ಓಡಾಡುವ ಜಾಗದಲ್ಲೇ ಮನುಷ್ಯರು ಓಡಾಡುತ್ತಿದ್ದಾರೆ.  ಇದೇ ಸಮಸ್ಯೆ ಹಲಸೂರಿನ ಕೆಲವು ಪ್ರದೇಶಗಳಲ್ಲೂ ಇದೆ. ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿ ವಿನಂತಿ.

-ಲಕ್ಷ್ಮಿ, ಇಂದಿರಾನರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.