ADVERTISEMENT

ನಿಜ ಬಣ್ಣ ಬಯಲು

ಜಯವಂತ ಕಾಡದೇವರ, ಬನಹಟ್ಟಿ
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST

‘ರತ್ನವಾಗುವುದು ಸೇವೆಯಿಂದಲೇ ವಿನಾ ಪ್ರತಿಭೆಯಿಂದಲ್ಲ!’ ಎಂಬ ಆಕಾರ್‌  ಪಟೇಲ್‌ ಅವರ ಲೇಖನವನ್ನು (ಪ್ರ.ವಾ., ಜುಲೈ 25) ನಾನು ಸಂಪೂರ್ಣ ಅನುಮೋದಿಸುತ್ತೇನೆ.

ರಾಜ್ಯಸಭೆಯ ಸದಸ್ಯರಾಗಿ ಕರ್ತವ್ಯದೆಡೆಗೆ  ನಿರ್ಲಕ್ಷ್ಯ ತೋರಿದ ಲತಾ ಮಂಗೇಶ್ಕರ್ ಹಾಗೂ ಸಚಿನ್‌ ತೆಂಡೂಲ್ಕರ್ ಅದೆಂತು ‘ಭಾರತ ರತ್ನ’ವಾಗಬಲ್ಲರು? ವಿದೇಶಿ ವಸ್ತುಗಳ ಜಾಹೀರಾತುಗಳಲ್ಲಿ ಪಾಲ್ಗೊಂಡು ತೆಂಡೂಲ್ಕರ್‌ ಲಕ್ಷಾಂತರ ರೂಪಾಯಿ ಮಾಡಿಕೊಳ್ಳುತ್ತಾರೆ.

ಇಬ್ಬರೂ ಸೇವಾ ಮನೋಭಾವಕ್ಕಿಂತ ಹೆಚ್ಚಾಗಿ ಸ್ವಯಂ ಏಳ್ಗೆಗೆ ಆದ್ಯತೆ ಕೊಟ್ಟಿರುವುದನ್ನು ಲೇಖಕರು ಉದಾಹರಣೆ ಸಹಿತ ವಿವರಿಸಿದ್ದಾರೆ.
ಈ ಸೆಲೆಬ್ರಿಟಿಗಳ ನಿಜ ಬಣ್ಣ ಬಯಲು ಮಾಡುವಲ್ಲಿ ಸಾಕಷ್ಟು ಧೈರ್ಯ ತೋರಿರುವ ಅವರಿಗೆ ಅಭಿನಂದನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.