ಈ ಬಾರಿಯ ದಸರಾ ಮಹೋತ್ಸವದ ಸಭೆ ಸಮಾರಂಭಗಳಲ್ಲಿ ಹಾರ, ತುರಾಯಿ, ಪುಷ್ಪಗಳ ಬದಲು ಗಣ್ಯರಿಗೆ ಸಸಿಗಳನ್ನು ನೀಡಿ ಪರಿಸರಸ್ನೇಹಿ ದಸರಾ ಆಚರಿಸಲು ತೀರ್ಮಾನಿಸಿರುವುದು ಒಳ್ಳೆಯ ನಿರ್ಧಾರ. ವಿವಿಧ ರೀತಿಯ ಹಣ್ಣುಗಳಾದ ತೆಂಗು, ಸಪೋಟ, ದಾಳಿಂಬೆ, ಹಲಸು, ಮಾವು, ಸೀಬೆ, ಪಪ್ಪಾಯಿ, ನೇರಳೆ ಹಾಗೆಯೇ ಔಷಧಿಯುಕ್ತ ಸಸಿಗಳಾದ ಬೇವು, ಕರಿಬೇವುಗಳ ಜೊತೆಗೆ ತೇಗ, ಸಿಲ್ವರ್ ಮುಂತಾದ ಉಪಯುಕ್ತ ಸಸಿಗಳನ್ನು ವಿತರಿಸಲಿ. ಸಸಿಗಳನ್ನು ಸ್ವೀಕರಿಸುವ ಗಣ್ಯರೂ ಇದು ಅವಿಸ್ಮರಣೀಯ ಕಾಣಿಕೆ ಎಂದು ಅರಿಯಬೇಕು. ತಮ್ಮ ಸಹಾಯಕರಿಗೆ ಕೊಟ್ಟು ಕೈತೊಳೆದುಕೊಳ್ಳಬಾರದು. ಆ ಸಸಿಗಳನ್ನು ನೆಟ್ಟು ಅದನ್ನು ಮಕ್ಕಳಂತೆ ಜೋಪಾನವಾಗಿ ಕಾಪಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.