ನ್ಯೂ ಟಿಂಬರ್ ಲೇಔಟ್ ವ್ಯಾಪ್ತಿಗೆ ಸೇರಿರುವ ಎಂ.ಸಿ.ಟಿ. ಕ್ವಾರ್ಟರ್ಸ್ನ ಕೊಳೆಗೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆ ನೀರು ಬರುವುದರಿಂದ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಹಾಗೂ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ದಯಮಾಡಿ ಈ ವಾರ್ಡ್ಗೆ ಸಂಬಂಧಪಟ್ಟ ಜಲಮಂಡಳಿ ಅಧಿಕಾರಿಗಳು ಬೆಳಗಿನ ಜಾವ ಇಲ್ಲವೇ ಸಾಯಂಕಾಲ ನೀರನ್ನು ಬಿಟ್ಟರೆ ಬಡ ಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗುತ್ತದೆ. ನೀರಿಗಾಗಿ ಕಾಯುವ ಬವಣೆಯೂ ತಪ್ಪುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.