ADVERTISEMENT

ಬಿಎಂಟಿಸಿ ಬಸ್ಸು ಕಲ್ಪಿಸಿ

ಕುಂದು ಕೊರತೆ

ಶ್ರೀಧರ.ಎಂ., ಚಂದಾಪುರ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಆಗಸ್ಟ್‌ 21ರಂದು ಸಂಜೆ 6 ಗಂಟೆ ಸಮಯದಲ್ಲಿ ಹೊಸೂರ್‌  ರಸ್ತೆ  ಸಿಗ್ನಲ್‌ನಲ್ಲಿ ಸುಮಾರು 5 ಗಂಟೆ ಟ್ರಾಫಿಕ್‌ ಜಾಮ್‌ ಆದ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುವ ನಾರಾಯಣ ಆಸ್ಪತ್ರೆ, ಚಂದಾಪುರ ಹಾಗೂ ಇತರೆ ಬಡಾವಣೆಯ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿರುತ್ತದೆ. ಆದ ಕಾರಣ ಕೆಲವು ಬಿಎಂಟಿಸಿ ಬಸ್ಸುಗಳನ್ನು ಮೇಲುಸೇತುವೆ ಮುಖಾಂತರ ಚಂದಾಪುರದಿಂದ ಸೇಂಟ್‌ ಜಾನ್‌್ಸ ಆಸ್ಪತ್ರೆಯವರೆಗೆ ಪ್ರತಿ 15 ನಿಮಿಷಕ್ಕೆ ಒಂದರಂತೆ ಹೊರಡಿಸಿದಲ್ಲಿ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಬಹುದು. ದಯಮಾಡಿ ಬಿಎಂಟಿಸಿ ಅಧಿಕಾರಿಗಳು ಈ ಸಲಹೆಯ ಬಗ್ಗೆ ಸ್ಪಂದಿಸಿ, ಮೇಲುಸೇತುವೆ ಮುಖಾಂತರ ಪ್ರಯಾಣಿಸುವ ಭಾಗ್ಯವನ್ನು ಅತಿ ಶೀಘ್ರವಾಗಿ ಕಲ್ಪಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.