ADVERTISEMENT

ಬ್ಯಾಂಕ್‌ಗಳಲ್ಲಿ ಕನ್ನಡ...

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ, ನೌಕರಿಗಾಗಿ ನಡೆಸುವ ಸಂದರ್ಶನವನ್ನು ಸ್ಥಳೀಯ ಭಾಷೆಯಲ್ಲಿ ನಡೆಸಬೇಕು ಎಂಬು ದನ್ನು ಸೇರಿಸಲಾಗಿದೆ. ಆದರೆ, ಇಂದಿನ ಸಂದ ರ್ಭದಲ್ಲಿ, ರಾಜ್ಯ ಸರ್ಕಾರದ ಪಾಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿ ಗರಿಗಿಂತ ಹೊರ ರಾಜ್ಯಗಳ ಕನ್ನಡೇತರ ಅಭ್ಯರ್ಥಿಗಳೇ ಹೆಚ್ಚಿರುವುದನ್ನು ಗಮನಿಸಬೇಕು.

ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿಗರು ಇಲ್ಲದಿದ್ದರೆ ಹಳ್ಳಿಗರಿಗೆ ಬ್ಯಾಂಕ್‌ ವಹಿವಾಟು ನಡೆಸುವಾಗ ತೊಂದರೆ ಆಗುತ್ತದೆ. ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದರಿಂದ ಕನ್ನಡಿಗರ ಉದ್ಯೋಗದ ಸಮಸ್ಯೆ ಹಾಗೂ ಗ್ರಾಮೀಣ ವಾಸಿಗಳ ವಹಿವಾಟಿನ ಸಮಸ್ಯೆಯನ್ನು ತುಸು ನಿವಾರಿಸುವ ಜೊತೆಗೆ ಗ್ರಾಮೀಣ ಬ್ಯಾಂಕುಗಳ ಆದಾಯವನ್ನೂ ಹೆಚ್ಚಿಸಬಹುದು.
-ಪ್ರವೀಣ್ ಕುಮಾರ್ ಜಿ., ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.