‘ಗ್ರಹಿಸಲಾರದವರ ಅವಾಂತರ’ (ವಾ.ವಾ., ಆ. 14). ಡಾ. ಯೋಗೀಶ ಕೈರೋಡಿಯವರದು, ಗ್ರಹಿಸಿದವರ ‘ಅವಾಂತರ’ಕ್ಕೆ ಅತ್ಯುತ್ತಮ ನಿದರ್ಶನ. ಭೌಗೋಳಿಕ ಗಡಿ ದಾಟುವವರು ಸಭ್ಯತೆಯ ಗಡಿಯನ್ನೂ ದಾಟಿದರೆ ತಪ್ಪಿಲ್ಲ ಎಂಬ ‘ಸಿದ್ಧಾಂತ’ ಭಯಂಕರ! ಏನೇ ಹೇಳಿದರೂ ನೀತಿ ನೀತಿಯೇ, ಅನೀತಿ ಅನೀತಿಯೇ.
ಅಲ್ಲದೆ, ಲೇಖಕರೆ ಕ್ಷಮೆ ಯಾಚಿಸಿರುವಾಗ, ಯೋಗೀಶರ ಈ ಉಪದ್ವ್ಯಾಪ ಏತಕ್ಕೆ? (ಅಂದಹಾಗೆ, ‘ಯಶಸ್ತಿಲಕ ಚಂಪೂ’ ಪ್ರಾಕೃತದ್ದಲ್ಲ, ಸಂಸ್ಕೃತದ್ದು.)
ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.