ADVERTISEMENT

ಮತದಾರರು ಯೋಚಿಸಲಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಅಕಾರಣವಾಗಿ ನಡೆಯುವ ಮರು ಚುನಾವಣೆಗಳು ಸರ್ಕಾರಕ್ಕೆ ಅನಗತ್ಯ ಹೊರೆ. ಇದಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯೇ ಉದಾಹರಣೆ. ಇಲ್ಲಿನ ಜನಪ್ರತಿನಿಧಿಯಾಗಿದ್ದ ಶ್ರೀನಿವಾಸ ಪ್ರಸಾದ್‌ ಅವರು ರಾಜಕೀಯದಲ್ಲಿ ನುರಿತ ವ್ಯಕ್ತಿ. ಆದರೆ ಅವರು ಹೀಗೆ ಅಕಾಲಿಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಂದು ಪಕ್ಷದಿಂದ ಚುನಾವಣೆ ಎದುರಿಸಲು ಹೊರಟಿರುವುದು ಮತದಾರರಿಗೆ ಹೇಗೆ ಸರಿಯೆನಿಸುತ್ತದೆ?

ಮಂತ್ರಿ ಪದವಿ ಕಳೆದುಕೊಂಡದ್ದೇ ಅವರ ರಾಜೀನಾಮೆಗೆ ಮುಖ್ಯ ಕಾರಣ. ಅವರು ಪಕ್ಷ ಬದಲಿಸುತ್ತಿರುವುದು ಇದು ಮೊದಲೇನಲ್ಲ. ಈಗಲೂ ಅವರು ಅದಕ್ಕಾಗಿ ಯಾವುದೇ ಮುಜುಗರ ಪಟ್ಟಂತಿಲ್ಲ. ಮಂತ್ರಿ  ಪದವಿ ಇಲ್ಲದಿದ್ದರೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ  ಮಾಡಲು ಅವರಿಗೆ ಸಾಧ್ಯವಾಗದೇ?

ಬಹುಪಾಲು ರಾಜಕಾರಣಿಗಳ ಮನೋಧೋರಣೆ ಇದೇ ಆಗಿದೆ. ಒಬ್ಬ ಜನಪ್ರತಿನಿಧಿಗೆ ಜನಸೇವೆಯೇ ಗುರಿಯಾಗಿದ್ದರೆ ಅದಕ್ಕೆ ಮಂತ್ರಿ ಪದವಿಯ ಅವಶ್ಯಕತೆ ಇರುವುದಿಲ್ಲ. ಮತದಾರರು ಇಂಥ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
-ಕೆ.ಎಸ್.ಸೋಮೇಶ್ವರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.