ADVERTISEMENT

ಮಸಿ ಬಳಿಯುವುದೇಕೆ?

ಕಾಂತಿಲ ತಿರುಮಲೇಶ್ವರ ಭಟ್ಟ, ಮಂಗಳೂರು
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿಗೆ ಸಹಿ ಮಾಡಿದ ವೀರಶೈವ ಶಾಸಕರ ಮುಖಗಳಿಗೆ ಮಸಿ ಬಳಿಯುವುದಾಗಿ ಅಖಿಲ ಭಾರತ
ವೀರಶೈವ ಜಾಗೃತಿ ವೇದಿಕೆ ಹೇಳಿದೆ. ಈ ನಿಲುವು ಬಹಳ ಅಪಾಯಕಾರಿ ಬೆಳವಣಿಗೆ.

ಇಲ್ಲಿ ಜಾತಿ ವಿಚಾರವನ್ನು ಎಳೆದು ತರುವುದು ಸರಿಯಲ್ಲ. ವಿರೋಧ ಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ಅಡಿ ಅವರ ಪದಚ್ಯುತಿಗೆ ಮುಂದಾಗಿದೆಯೇ  ಹೊರತು, ಅವರೊಬ್ಬ ವೀರಶೈವರು ಎಂಬ ಕಾರಣಕ್ಕಾಗಿ ಅಲ್ಲ.

ಯಾವುದೇ ಗಂಭೀರ ಆರೋಪವಿಲ್ಲದ ಅಡಿ ಅವರ ಪದಚ್ಯುತಿಗೆ ಮುಂದಾದ ಕಾಂಗ್ರೆಸ್‌ನ ಧೋರಣೆಯನ್ನು ಪ್ರಜ್ಞಾವಂತರೆಲ್ಲರೂ ಖಂಡಿಸಬೇಕು. ಆದರೆ ವೀರಶೈವ ವೇದಿಕೆ ಮಸಿ ಬಳಿದು ಅಸಭ್ಯ ರೀತಿಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.