ಗ್ರಾಮಪಂಚಾಯಿತಿಗಳ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಮೀಸಲಾತಿ ನೀಡದಿರುವ ಸರ್ಕಾರದ ಕ್ರಮ ಸರಿಯಲ್ಲ.
ನಿರುದ್ಯೋಗಿಗಳಾಗಿ ಮನೆಯಲ್ಲಿ ಇರುವ ಯುವಕರು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲ ಸಮುದಾಯಗಳಲ್ಲೂ ಇಂಥ ವಿದ್ಯಾವಂತರಿದ್ದು, ಸಹಜವಾಗಿ ಹುದ್ದೆಗಳಿಗೆ ಪೈಪೋಟಿ ಹೆಚ್ಚಿದೆ. ಇಂಥಸ್ಥಿತಿಯಲ್ಲಿ ಹಿಂದುಳಿದವರಿಗೂ ಅವಕಾಶ ಲಭಿಸಬೇಕಾದರೆ ಮೀಸಲಾತಿ ಕೊಡುವುದು ಅನಿವಾರ್ಯ. ಆದರೆ ಸರ್ಕಾರ, ‘ಈ ಹುದ್ದೆಗಳಿಗೆ ಮೀಸಲಾತಿ ಅನ್ವಯಿಸುವುದಿಲ್ಲ’ ಎನ್ನುವುದು ಯಾವ ನ್ಯಾಯ?
–ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.