ADVERTISEMENT

ಮೇಲ್ಚಾವಣಿ ಸರಿಪಡಿಸಿ

ಕುಂದು ಕೊರತೆ

ನಂದಾ, ಪದ್ಮನಾಭನಗರ
Published 28 ಸೆಪ್ಟೆಂಬರ್ 2015, 19:30 IST
Last Updated 28 ಸೆಪ್ಟೆಂಬರ್ 2015, 19:30 IST

ಮೆಜೆಸ್ಟಿಕ್‌ನ ಬಿ.ಎಂ.ಟಿ.ಸಿ. ನಿಲ್ದಾಣದ ಫ್ಲಾಟ್‌ಫಾರ್ಮ್ 15 ಸೇರಿದಂತೆ ಹಲವೆಡೆಗಳಲ್ಲಿ ನಿಲ್ದಾಣಗಳ ಮೇಲ್ಚಾವಣಿ ಹಾಳಾಗಿದ್ದು, ಮಳೆ ಬಂದಾಗ ನೀರು ಸೋರುತ್ತದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು ನಿಲ್ದಾಣದಲ್ಲೇ ನೀರಲ್ಲಿ ತೊಯ್ದು ಹೋಗುವಂತಾಗಿದೆ.

ಇಷ್ಟೇ ಅಲ್ಲದೆ ನಿಲ್ದಾಣದಲ್ಲಿ ಹಾಕಲಾಗಿರುವ ಲೈಟ್‌ಗಳೂ ಹಾಳಾಗಿದ್ದು, ಕತ್ತಲಾಗುತ್ತಿದ್ದಂತೆ ಕಳ್ಳರ ಭಯದಿಂದ ಪ್ರಯಾಣಿಕರು ಪರದಾಡುವಂತೆ ಆಗಿದೆ. ಇನ್ನಾದರೂ ಬಿ.ಎಂ.ಟಿ.ಸಿ. ಅಧಿಕಾರಿಗಳು ಮೇಲ್ಚಾವಣಿ ಹಾಗೂ ಲೈಟ್‌  ಸರಿಪಡಿಸಬೇಕಾಗಿ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.