ADVERTISEMENT

ರಾಷ್ಟ್ರೀಯ ನೀತಿ ಅಗತ್ಯ

ಆರ್.ಕೆ.ದಿವಾಕರ
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST

‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣಾ ಗಿಮಿಕ್’ (ವಾರದ ಸಂದರ್ಶನ, ಪ್ರ.ವಾ., ಡಿ. 24) ಎಂದಿದ್ದಾರೆ ಎ. ಮರಿಯಪ್ಪ. ಇವು ‘ಕೊಬ್ಬಿನ ಮಾತುಗಳು’. ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನೂ ಎತ್ತಿ ತೋರಿಸುತ್ತವೆ.

ಮಕ್ಕಳಿಗೆ ಶಿಕ್ಷಣ ಕೊಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ದೋಚುವ ದಂಧೆಯಾಗಿಸಲು ಅದನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟಿದೆ ಸರ್ಕಾರ. ಕಡ್ಡಾಯ ಶಿಕ್ಷಣವೆನ್ನುವುದು ದೊಡ್ಡ ಕಾರ್ಯಕ್ರಮ ನಿಜ. ಇದರಲ್ಲಿ ಖಾಸಗಿ ಸಹಭಾಗಿತ್ವ ಕೂಡ ಬಹಳ ಮುಖ್ಯ. ಆದರೆ ಸರ್ಕಾರ ದಂಧೆಕೋರರಿಗೆ ತನ್ನ ಜುಟ್ಟು ಒಪ್ಪಿಸುವುದು ಮರ್ಯಾದೆಯಲ್ಲ.

ಶಾಲಾ ಶಿಕ್ಷಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಖಾಸಗಿ ದಂಧೆಕೋರರು ಇದರ ದುರ್ಲಾಭ ಪಡೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಕುರಿತಂತೆ ರಾಜ್ಯಗಳಿಗೆ ಪರಮಾಧಿಕಾರವಿರುವ ರಾಷ್ಟ್ರೀಯ ನೀತಿ ತುರ್ತಾಗಿ ಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.