ADVERTISEMENT

ಶಿಕ್ಷೆ ವಿಧಿಸಿ

ವಿನಂತಿ ಕುಲಕರ್ಣಿವಿಜಯಪುರ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ಪ್ರಭಾವಿ ಮಹಿಳೆ ಮಾಯಾವತಿ ಅವರ ಬಗ್ಗೆ  ಬಿಜೆಪಿಯಿಂದ ವಜಾಗೊಂಡಿರುವ ಮುಖಂಡ ದಯಾಶಂಕರ್ ಸಿಂಗ್‌ ಅವಾಚ್ಯ ಪದಗಳನ್ನು ಬಳಸಿರುವುದು  ಖಂಡನೀಯ.

ಬಿಜೆಪಿಯ ಘನತೆಗೆ ಇದರಿಂದ ಧಕ್ಕೆಯಾಗಿದೆ. ಯಾವುದೇ ಮಹಿಳೆ ಇಂಥ ಮಾತು ಕೇಳಿ ಸುಮ್ಮನಿರಲು ಸಾಧ್ಯವಿಲ್ಲ. ಸಿಂಗ್‌ ಅವರು ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಬಿಜೆಪಿ ಆ ರಾಜ್ಯದಲ್ಲಿ ಗೆಲ್ಲಲು ಹೂಡಿರುವ ತಂತ್ರಗಳಿಗೆ ಈ ಮಾತೇ ಕಡಿವಾಣ ಹಾಕಿದೆ.

ಕಠಿಣ ಶಿಕ್ಷೆ ವಿಧಿಸಿದಾಗಲೇ  ದಯಾಶಂಕರ್ ಅಂಥವರಿಗೆ ಬುದ್ಧಿ ಬರಲು ಸಾಧ್ಯ.  ನಮ್ಮನ್ನು ರಕ್ಷಿಸಬೇಕಾದ ನಾಯಕರೇ ಇಂತಹ ಕೀಳು ಕೆಲಸ ಮಾಡಿದರೆ ನಾವು ಯಾರನ್ನು ನಾಯಕರೆಂದು ಸ್ವೀಕರಿಸಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT