ADVERTISEMENT

ಸಾಹಿತ್ಯಲೋಕ ದಿಗ್ಭ್ರಮೆ

ಡಾ.ಲಕ್ಷ್ಮಣ ವಿ.ಎ.
Published 30 ಆಗಸ್ಟ್ 2015, 19:30 IST
Last Updated 30 ಆಗಸ್ಟ್ 2015, 19:30 IST

ದುಷ್ಕರ್ಮಿಗಳು ಹಾರಿಸಿದ ಗುಂಡು  ಕಲಬುರ್ಗಿ ಅವರನ್ನಷ್ಟೆ  ಬಲಿಪಡೆಯದೆ, ನಾಡಿನ ಸಮಸ್ತ ಚಿಂತಕರ, ವಿದ್ವಾಂಸರ ಎದೆಗಿಳಿದು ಜನಸಮೂಹವನ್ನು ಅಪಾರ ಶೋಕದಲ್ಲಿ ಮುಳುಗಿಸಿದೆ. ಧಾರವಾಡದಂತಹ ಸಾಂಸ್ಕೃತಿಕ ವಾತಾವರಣದಲ್ಲಿ ದುರಂತ ನಡೆದಿರುವುದು ಸಾಹಿತ್ಯ ಲೋಕದಲ್ಲಿ ದಿಗ್ಭ್ರಮೆ ಮೂಡಿಸಿದೆ.

ಹತ್ಯೆಗೆ ನಿಖರ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದ್ದರೂ,ಸಾಂಸ್ಕೃತಿಕ ವಲಯದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅವರ ಸಾವಿಗೆ ಕಾರಣವಾಗಿರಬಹುದೆಂಬ ಕೂಗು ಬಲಪಡೆದಿದೆ. ಉನ್ನತ ಮಟ್ಟದ ತನಿಖೆಯಿಂದ ಸತ್ಯ ಬಯಲಿಗೆ ಬರಬಹುದು, ಕಾರಣ ಏನೇ ಇದ್ದರೂ ನಾಡಿನ ಬಹುಶ್ರುತ ವಿದ್ವಾಂಸರೊಬ್ಬರ ದುರಂತ ಅಂತ್ಯ ನಾಡಿನ ಸಮಸ್ತರಲ್ಲಿ  ಅತೀವ ಶೋಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.