ADVERTISEMENT

‘ರಕ್ತ ಚೆಲ್ಲೀತು!’

​ಸಿ.ಪಿ.ಕೆ.ಮೈಸೂರು
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

‘ಎಂಬತ್ತರ ಉದಯರಾಗ’ (ಗುಲ್‌ಮೊಹರ್‌, ಪ್ರ. ವಾ., ಮಾ. 16).
ಒಂದು ನೆನಪು. ಬಹಳ ಹಿಂದೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಯಾವುದೋ ಒಂದು ಸಮಾರಂಭ. ಉದಯ ಕುಮಾರ್‌ ಮುಖ್ಯ ಅತಿಥಿ. ಸಮಾರಂಭದಲ್ಲಿ ವಿದ್ಯಾರ್ಥಿಗಳ ಗಲಾಟೆಯೋ ಗಲಾಟೆ; ನಿಲ್ಲಲೊಲ್ಲದು. ಉದಯಕುಮಾರ್‌ ಎದ್ದು ನಿಂತು ಭಾವುಕ ಕಂಠದಿಂದ ಹೇಳಿದರು: ‘ನೀವು ಹೀಗೆಯೇ ಗಲಾಟೆ  ಮುಂದುವರಿಸಿದರೆ, ನನ್ನ ರಕ್ತ ಈ ವೇದಿಕೆಯ ಮೇಲೆಯೆ ಚೆಲ್ಲೀತು!’ ಕೂಡಲೆ ಇಡೀ ಸಭೆ ಗರ ಬಡಿದಂತೆ ಗಪ್‌ಚುಪ್‌. ಅದು ಉದಯಕುಮಾರ್‌!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.