ADVERTISEMENT

‘ಸಂಗಟಿ’ ನೀಡಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟಕ್ಕೆ ಅನ್ನ–ಸಾರು ಕೊಡುವುದರ ಬದಲಾಗಿ ಜೋಳದ ನುಚ್ಚಿನಿಂದ ಮಾಡಿದ  ‘ಸಂಗಟಿ’ (ಉಪ್ಪಿಟ್ಟಿನ ಸ್ವರೂಪ) ಹಾಗೂ ಸಾರು ಕೊಟ್ಟರೆ ಒಳ್ಳೆಯದು.  ಮಕ್ಕಳ ಬೆಳವ­ಣಿ­ಗೆಗೆ ಪೌಷ್ಟಿಕ ಆಹಾರ ಅತಿ ಮುಖ್ಯವಾಗಿರುವುದರಿಂದ ಮಧ್ಯಾ­ಹ್ನದ ಬಿಸಿ ಊಟಕ್ಕೆ ಸಂಗಟಿ–ಸಾರು ಕೊಡುವುದು ಉಚಿತ. 

ಅಕ್ಕಿ­ಯಲ್ಲಿ ಯಾವುದೇ ಬಗೆಯ ಪೌಷ್ಟಿಕಾಂಶ ಇಲ್ಲ. ಅದರಿಂದ ಮಕ್ಕಳ ಬೆಳವಣಿ­ಗೆಗೆ ಉಪಯೋಗವಾಗುವುದಿಲ್ಲ. ಸಂಗಟಿ– ಸಾರು,  ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕ. ತಯಾ­ರಿಯೂ ಸುಲಭ.  ಜೋಳ­ದಿಂದ ತಯಾ­ರಿಸಿದ ಯಾವುದೇ ಆಹಾ­ರವು ಪೌಷ್ಟಿಕಾಂಶ­ದಿಂದ ಕೂಡಿರು­ತ್ತದೆ. ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸಂಗಟಿ ವ್ಯವಸ್ಥೆ ಆ ಸಮಸ್ಯೆ ನಿವಾರಣೆಗೂ ಸಹಕಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.