ADVERTISEMENT

ಪುಂಡಾಟಿಕೆ ಭಾಗ್ಯ

ಆನಂದ ಉಳಯ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಇಷ್ಟು ದಿನ ಕಾನೂನು ವ್ಯವಸ್ಥೆಯನ್ನು ಕದಡುವವರು ಸಮಾಜಘಾತುಕ ವ್ಯಕ್ತಿಗಳು ಮಾತ್ರ ಎಂದು ನಾವೆಂದುಕೊಂಡಿದ್ದೆವು. ಆದರೆ ಕಾಂಗ್ರೆಸ್ ನಾಯಕರುಗಳಾದ ಮೊಹಮ್ಮದ್ ಹ್ಯಾರಿಸ್ ಮತ್ತು ನಾರಾಯಣಸ್ವಾಮಿ ಅವರ ಅಟಾಟೋಪ ನೋಡಿದ ಮೇಲೆ ಇದು ತಪ್ಪು ಗ್ರಹಿಕೆ ಎಂದು ಮನವರಿಕೆಯಾಗಿದೆ.

ಸಮಾಜಘಾತುಕ ವ್ಯಕ್ತಿಗಳ ಸಾಲಿಗೆ ನಾಯಕರುಗಳೇ ಸೇರುತ್ತಿದ್ದಾರೆ. ಆದುದರಿಂದ ಈಗ ‘ನಡೆದಂತೆ ನುಡಿಯುವ’ ಸಿದ್ದ ಸರ್ಕಾರ ಜನರಿಗೆ ಇನ್ನೊಂದು ಭಾಗ್ಯ ನೀಡಬಹುದು. ಅದೇ ‘ಪುಂಡಾಟಿಕೆ ಭಾಗ್ಯ’. ಇದನ್ನು ಪ್ರಕಟಿಸಿದರೆ ಕಾಂಗ್ರೆಸ್ ಸರ್ಕಾರ ತನ್ನ ಮಡಿಲಿಗೆ ಇನ್ನೊಂದು ಗರಿ (ಅಥವಾ ಲಾಂಗ್?) ಸೇರಿಸಲು ಸಾಧ್ಯ.

ಆನಂದ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.