ನಮ್ಮ ವಿಧಾನಸೌಧವು ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ತಲೆಬರಹವನ್ನು ಹೊತ್ತು ಕಂಗೊಳಿಸುತ್ತಿದೆ. ನೂರು ದಿನ ಮುಖ್ಯಮಂತ್ರಿಯಾಗಿ ಮುಂದುವರಿದದ್ದೇ ಒಂದು ‘ಮಹಾ ಸಾಧನೆ’ ಎಂಬಂತೆ ಮುಖ್ಯಮಂತ್ರಿಯ ಅಭಿಮಾನಿಗಳು ‘ಕುಮಾರ ಶತಕ’ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಎಂಥ ಜನ!
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಇಲ್ಲಿಯವರೆಗೆ ಹತ್ತಾರು ಗುಡಿ, ಗುಂಡಾರ, ದೇವಾಯಲಯಗಳನ್ನು ಸುತ್ತಿ, ಸರ್ಕಾರಿ ಖರ್ಚಿನಲ್ಲಿ ಪೂಜೆ, ಪುನಸ್ಕಾರ, ಯಜ್ಞ, ಯಾಗ, ಹವನಗಳನ್ನು ಮಾಡಿದ್ದೇ ಮುಖ್ಯಮಂತ್ರಿಯವರ ಜನಸೇವೆಯ ಮಾದರಿ. ಸರ್ಕಾರದ ನೂರು ದಿನಗಳ ಸಾಧನೆಯಲ್ಲಿ ‘ದೇವರ ಕೆಲಸ’ವೇ ಹೆಚ್ಚಾಗಿ ಕಾಣಿಸುತ್ತಿದೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.