ADVERTISEMENT

‘ನಾವೂ ನಿಮ್ಮ ಪಕ್ಷ ಸೇರ್ತೀವಿ’

ಅಮಿತ್ ಎಂ.ಎಸ್.
Published 29 ಜುಲೈ 2017, 19:30 IST
Last Updated 29 ಜುಲೈ 2017, 19:30 IST

ಚಾಮರಾಜನಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಚಾಮರಾಜನಗರ ತಾಲ್ಲೂಕಿನಿಂದ ಸ್ಪರ್ಧಿಸುವ ಉಮೇದು ಹೊಂದಿರುವ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‌, ಆಗಾಗ್ಗೆ ತಾಲ್ಲೂಕು ಕೇಂದ್ರಕ್ಕೆ ಬಂದು ವಿವಿಧ ಕಾಮಗಾರಿ ‘ಪರಿಶೀಲನೆ’ ನಡೆಸುತ್ತಿರುತ್ತಾರೆ.

ಇತ್ತೀಚೆಗೆ ಚಂದಕವಾಡಿ ಗ್ರಾಮದಲ್ಲಿ ‘ಹಿಂದುಳಿದ ಗಡಿನಾಡು ಗ್ರಾಮೀಣಾಭಿವೃದ್ಧಿ ಸಮಾವೇಶ’ ಎಂಬ ಕಾರ್ಯಕ್ರಮ ನಡೆಯಿತು. ಸಾವಿರಾರು ಜನರೂ ಸೇರಿದ್ದರು. ಶೀರ್ಷಿಕೆಗೂ ಅಲ್ಲಿ ನಡೆದ ಕಾರ್ಯಕ್ರಮಕ್ಕೂ ಸಂಬಂಧವಿರಲಿಲ್ಲ.

ಆರಂಭದ ಅರ್ಧ ಗಂಟೆ ವಾಟಾಳ್ ಅವರಿಗೆ ಸ್ವಾಗತ ಮತ್ತು ಹಾರ ತುರಾಯಿ ಹಾಕುವುದಕ್ಕೆ ಮೀಸಲಾಯಿತು. ವಾಟಾಳ್‌ ಅವರ ಭಾಷಣ ಮುಗಿದ ಬಳಿಕ ನಡೆದದ್ದು ಪಕ್ಷ ಸೇರ್ಪಡೆ ಕಾರ್ಯಕ್ರಮ.

ADVERTISEMENT

ಒಂದಷ್ಟು ಮಂದಿ ವಾಟಾಳ್ ಅವರಿಂದ ಹಾರ ಹಾಕಿಸಿಕೊಂಡು ಫೋಟೊ ತೆಗೆಸಿಕೊಳ್ಳುವುದನ್ನು ನೋಡಿ ಉಳಿದ ಜನರಲ್ಲೂ ಹುಮ್ಮಸ್ಸು ಮೂಡಿತು. ‘ನಾವೂ ನಿಮ್ಮ ಪಕ್ಷ ಸೇರ್ತೀವಿ’ ಎಂದು ವೇದಿಕೆಗೆ ನುಗ್ಗತೊಡಗಿದರು. ತಂದಿದ್ದ ಹಾರಗಳೆಲ್ಲ ಖಾಲಿಯಾದವು.

ಮೊದಲು ವಾಟಾಳ್ ಅವರಿಗೆ ಹಾಕಿ ತೆಗೆದಿರಿಸಿದ್ದ ಹಾರಗಳನ್ನೇ ‘ಹೊಸ ಕಾರ್ಯಕರ್ತರಿಗೆ’ ಹಾಕಲಾಯಿತು. ಆ ಹಾರಗಳು ಸಹ ಖಾಲಿಯಾದರೂ ಪಕ್ಷಕ್ಕೆ ಸೇರ್ಪಡೆಯಾಗಿ ಫೋಟೊ ತೆಗೆಸಿಕೊಳ್ಳುವವರ ಸಂಖ್ಯೆ ಕರಗಿರಲಿಲ್ಲ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.