ಚಿರಂಜೀವಿ ಸರ್ಜಾ ಅಭಿನಯದ ‘ಸಂಹಾರ’ ಚಿತ್ರದ ಟ್ರೇಲರ್, ಅವರ ಹುಟ್ಟು ಹಬ್ಬದ ದಿನವೇ ಬಿಡುಗಡೆ ಆಯಿತು.
ಚಿರಂಜೀವಿ ಸರ್ಜಾ ಅವರು ಈ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಮೈಸೂರು ಹಾಗೂ ಮಂಗಳೂರು ಕಡೆ ನಡೆದಿದೆ. ಅಂಧನಾಗಿದ್ದರೂ, ಹೋಟೆಲ್ನಲ್ಲಿ ಅಡುಗೆ ಮಾಡುವುದು ಚಿರಂಜೀವಿ ಅವರ ಪಾತ್ರದ ವೈಶಿಷ್ಟ್ಯ. ಸಿನಿಮಾವನ್ನು ನವೆಂಬರ್ನಲ್ಲಿ ತೆರೆಗೆ ತರುವ ಉದ್ದೇಶ ತಂಡದ್ದು.
ಯಶವಂತ ಶೆಟ್ಟಿ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಅರುಣಾ ಬಾಲರಾಜ್ ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು, ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಗದೀಶ್ ವಾಲಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎ. ವೆಂಕಟೇಶ್, ಆರ್.ಸುಂದರ ಕಾಮರಾಜ್ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಗುರುದೇಶ್ಪಾಂಡೆ ಇದರ ನಿರ್ದೇಶಕರು. ಕಾವ್ಯಾ ಶೆಟ್ಟಿ ಹಾಗೂ ಹರಿಪ್ರಿಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.