ADVERTISEMENT

ಉಪಾಧ್ಯಕ್ಷರಾಗಿ ವಿಜಯರಾಘವನ್‌

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಬೆಂಗಳೂರು: ಕರ್ನಾಟಕದ ಟಿ.ಡಿ. ವಿಜಯರಾಘವನ್‌ ಭಾರತ ಈಜು ಫೆಡರೇಷನ್‌ನ ಉಪಾಧ್ಯಕ್ಷರಾಗಿ ಹಾಗೂ ಎಂ.ಸತೀಶ್‌ ಕುಮಾರ್‌ ಸಹಾಯಕ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ತಿಂಗಳ 23ರಂದು ಚೆನ್ನೈನಲ್ಲಿ ವಾರ್ಷಿಕ ಮಹಾಸಭೆಯ ವೇಳೆ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಗೋವಾದ ದಿಗಂಬರ ವಿ. ಕಾಮತ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಂಗಾಳದ ರಾಮಾನುಜ ಮುಖ್ಯೋಪಾ ಧ್ಯಾಯ, ಪಂಜಾಬ್‌ನ ಬಾಲರಾಜ್‌ ಶರ್ಮಾ, ಕೇರಳದ ಎಸ್‌.ರಾಜೀವ್‌ ಮತ್ತು ದೆಹಲಿಯ ರಾಜಕುಮಾರ್‌  ಅವರು ಉಪಾಧ್ಯಕ್ಷರುಗಳಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಗುಜ ರಾತ್‌ನ ಕಮಲೇಶ್‌ ನಾನಾವತಿ, ಜಂಟಿ ಕಾರ್ಯದರ್ಶಿಗಳಾಗಿ ಬಿಹಾರದ    ರಾಮ್‌ ಬಿಲಾಸ್‌ ಪಾಂಡೆ, ಮಧ್ಯಪ್ರದೇಶದ ಪಿಯೂಷ್‌ ಶರ್ಮಾಆಯ್ಕೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.