ಬೆಂಗಳೂರು: ಕರ್ನಾಟಕದ ಅಗ್ರಶ್ರೇಯಾಂ ಕದ ಆಟಗಾರರಾದ ಆಯುಷ್ ಪಿ. ಭಟ್ ಮತ್ತು ಲಕ್ಷಣ್ಯ ವಿಶ್ವನಾಥ್ ಅವರು ಎಎನ್ಟಿ–ಎಐಟಿಎ ಚಾಂಪಿಯನ್ಷಿಪ್ ಸೀರಿಸ್ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಎಎನ್ಟಿ ಅಕಾಡೆಮಿಯ ಅಂಗಳದಲ್ಲಿ ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಯುಷ್ 7–6, 6–4ರ ನೇರ ಸೆಟ್ಗಳಿಂದ ಕರ್ನಾಟಕದವರೇ ಆದ ಮೋನಿಲ್ ಲೋಟಿಲ್ಕರ್ ಅವರನ್ನು ಪರಾಭವಗೊಳಿಸಿದರು.
ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಲಕ್ಷಣ್ಯ 7–6, 2–6, 7–5ರಲ್ಲಿ ತಮಿಳುನಾಡಿನ ಎಸ್. ಆರ್. ಅನನ್ಯ ಅವರನ್ನು ಸೋಲಿಸಿದರು.
ಬಲಿಷ್ಠ ಆಟಗಾರ್ತಿಯರ ಹೋರಾ ಟಕ್ಕೆ ವೇದಿಕೆ ಕಲ್ಪಿಸಿದ್ದ ಫೈನಲ್ ಪಂದ್ಯದ ಆರಂಭಿಕ ಸೆಟ್ನಲ್ಲಿ ಇಬ್ಬರೂ ಜಿದ್ದಾ ಜಿದ್ದಿನ ಪೈಪೋಟಿ ನಡೆಸಿದರು. ಉಭಯ ಆಟಗಾರ್ತಿಯರು ಸರ್ವ್ ಉಳಿಸಿ ಕೊಂಡು ಸಾಗಿದ್ದರಿಂದ 6–6ರಲ್ಲಿ ಸಮ ಬಲ ಕಂಡುಬಂತು. ಆದರೆ ‘ಟೈ ಬ್ರೇಕರ್’ ನಲ್ಲಿ ರಾಜ್ಯದ ಆಟಗಾರ್ತಿ ಪರಾ ಕ್ರಮ ಮೆರೆದು ಗೆಲುವು ಒಲಿಸಿಕೊಂಡರು.
ಇದರಿಂದ ಕಿಂಚಿತ್ತೂ ವಿಚಲಿತರಾಗದ ಅನನ್ಯ ಎರಡನೇ ಸೆಟ್ ನಲ್ಲಿ ಆತಿಥೇಯ ಆಟಗಾರ್ತಿಯ ಸವಾಲು ಮೀರಿ ನಿಂತು 1–1ರಲ್ಲಿ ಸಮಬಲ ಮಾಡಿಕೊಂಡರು. ಹೀಗಾಗಿ ನಿರ್ಣಾಯಕ ಸೆಟ್ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಈ ಸೆಟ್ನ ಮೊದಲ 10 ಗೇಮ್ಗಳ ವರೆಗೆ ಇಬ್ಬರೂ ಸಮಬಲದ ಹೋರಾಟ ನಡೆಸಿದರು. ಆ ನಂತರ ಮಿಂಚಿದ ಲಕ್ಷಣ್ಯ ಪಂದ್ಯ ಗೆದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.