ಬೆಂಗಳೂರು: ಭಾರತ ಪುರುಷರ ತಂಡ ವು ಇಲ್ಲಿ ನಡೆದ ವಿಲಿಯಮ್ಸ್ ಜೋನ್ಸ್ ಕಪ್ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಸೋತಿತು.
ಭಾರತ 44–88 ಪಾಯಿಂಟ್ಸ್ಗಳಲ್ಲಿ ಇರಾನ್ ಎದುರು ಪರಾಭವಗೊಂಡಿತು.
ಇರಾನ್ ತಂಡದ ನವೀದ್ 21, ನವೀದ್ ರೆಜಫಿರ್ 19, ಸಜ್ಜದ್ ಪಜರೊಫೆತ್ 16 ಪಾಯಿಂಟ್ಸ್ ಕಲೆಹಾಕಿದರು. ಭಾರತದ ಪ್ರಸನ್ನ ವೆಂಕಟೇಶ್ ಶಿವಕುಮಾರ್ 16 ಹಾಗೂ ಅಮ್ಜೋತ್ ಸಿಂಗ್ ಗಿಲ್ ಎಂಟು ಪಾಯಿಂಟ್ಸ್ ಪಡೆದರು. ಮೊದಲ ಕ್ವಾರ್ಟರ್ನಲ್ಲೇ ಇರಾನ್ ತಂಡ ಮುನ್ನಡೆ ಪಡೆಯಿತು. ಪಂದ್ಯದ ಅಂತಿಮ ಹಂತದವರೆಗೂ ಈ ತಂಡ ಭಾರತಕ್ಕೆ ಮುನ್ನಡೆಯ ಅವಕಾಶ ಬಿಟ್ಟುಕೊಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.