ADVERTISEMENT

ವಿಜಯ ಬ್ಯಾಂಕ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:59 IST
Last Updated 7 ಅಕ್ಟೋಬರ್ 2015, 19:59 IST

ಬೆಂಗಳೂರು: ಅರವಿಂದ್‌ ಆರ್ಮುಗಂ ಮತ್ತು ರಾಜೇಶ್‌ ಉಪ್ಪಾರ ಅವರ ಉತ್ತಮ ಆಟದ ನೆರವಿನಿಂದ ವಿಜಯ ಬ್ಯಾಂಕ್‌ ತಂಡದವರು ಬುಧವಾರ ಆರಂಭವಾದ ಮುಲ್ಕಿ ಸುಂದರ್‌ ರಾಮ ಶೆಟ್ಟಿ ಸ್ಮಾರಕ ಅಖಿಲ ಭಾರತ ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯ ದಲ್ಲಿ ವಿಜಯ ಬ್ಯಾಂಕ್‌ 70–57ರಲ್ಲಿ ಸೌತ್‌ ಸೆಂಟ್ರಲ್‌ ರೈಲ್ವೆ ತಂಡವನ್ನು ಮಣಿಸಿತು. ವಿಜಯಿ ತಂಡದ ಅರವಿಂದ್‌ (22 ಪಾಯಿಂಟ್ಸ್‌), ಅನಿಲ್‌ (17) ಮತ್ತು ರಾಜೇಶ್‌ (16) ಮಿಂಚಿದರು. ‘ಎ’ ಗುಂಪಿನ ಪಂದ್ಯದಲ್ಲಿ  ಇನ್‌ಕಮ್‌ ಟ್ಯಾಕ್ಸ್‌ ಚೆನ್ನೈ ತಂಡ 77–65ರಲ್ಲಿ ಒಎನ್‌ಜಿಸಿ ಡೆಹ್ರಾಡೂನ್‌ ತಂಡವನ್ನು ಪರಾಭವಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.