ADVERTISEMENT

ಸಸಿ ನೆಟ್ಟ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 19:30 IST
Last Updated 5 ಜೂನ್ 2020, 19:30 IST
ಶಾಂತಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಸಸಿಗೆ ನೀರುಣಿಸಿದರು. ನಾಗರತ್ನ ಮಂಜುನಾಥ್, ಗೀತಾಮಂಜುನಾಥ್ ಜ್ಯೋತಿಮಂಜುನಾಥ್, ರಘು, ಜಯಂತ್ ಅವಿನಾಶ್ ಇದ್ದರು.
ಶಾಂತಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಸಸಿಗೆ ನೀರುಣಿಸಿದರು. ನಾಗರತ್ನ ಮಂಜುನಾಥ್, ಗೀತಾಮಂಜುನಾಥ್ ಜ್ಯೋತಿಮಂಜುನಾಥ್, ರಘು, ಜಯಂತ್ ಅವಿನಾಶ್ ಇದ್ದರು.   

ಕೆ.ಆರ್.ಪುರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಮಮೂರ್ತಿ ನಗರ ವಾರ್ಡ್‌ನಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ 1000 ಸಸಿಗಳನ್ನು ನೆಡಲಾಯಿತು.

ರಾಮಮೂರ್ತಿನಗರ ವಾರ್ಡ್‌ನ ಪುಣ್ಯಭೂಮಿ ಬಡಾವಣೆ, ಎನ್ಆರ್‌ಐ ಲೇಔಟ್, ಕಲ್ಕೆರೆ, ಬಂಜಾರ ಲೇಔಟ್, ಲೇಕ್ ವ್ಯೂ ಗಾರ್ಡನ್‌ನಲ್ಲಿ ಹೊಂಗೆ, ಮಾವು, ಬೇವು, ಸಂಪಿಗೆ, ತಾಪ್ಸಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.

ನಂತರ ಮಾತನಾಡಿದ ಫೌಂಡೇಷನ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ, ’ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪರಿಸರದಿಂದ ಎಲ್ಲವನ್ನೂ ತೆಗೆದುಕೊಳ್ಳುವ ನಾವು ಪರಿಸರಕ್ಕೆ ಕೊಡುಗೆ ನೀಡಬೇಕಿದೆ. ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಪೋಷಿಸುವ ಹೊಣೆ ಹೊರಬೇಕು‘ ಎಂದರು.

ADVERTISEMENT

ನಾಗರತ್ನ ಮಂಜುನಾಥ್, ಗೀತಾ ಮಂಜುನಾಥ್, ಜ್ಯೋತಿಮಂಜುನಾಥ್, ರಘು, ಜಯಂತ್, ಅವಿನಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.