ಗದಗ:ನಗರದಲ್ಲಿ ಮಂಗಳವಾರ ಸುರಿದ ಮಳೆ ರಮ್ಯ ವಾತಾವರಣವನ್ನು ಸೃಷ್ಟಿಸಿತ್ತು. ಸಂಜೆ ವೇಳೆ ಪಡುವಣ ಬಾನಿನಲ್ಲಿ ಮೂಡಿದ ನಸುಗೆಂಪು ಹಾಗೂ ಧರೆಗೆ ಧುಮ್ಮಿಕ್ಕುವ ಇರುಳುಗಪ್ಪಿನ ಜುಗಲ್ಬಂದಿ ನೋಟಕ್ಕೆ ಸೊಗಸಾಗಿತ್ತು. ಹಚ್ಚ ಹಸಿರೆಲ್ಲವೂ ಕಪ್ಪಿನಲಿ ಅಚ್ಚಾಗಿದ್ದರಿಂದ ಆಗಸದ ತುಂಬೆಲ್ಲಾ ಕೌತುಕಗಳ ಬೆಡಗು ಮೂಡಿತ್ತು. ಹೀಗೆ ಮುಸ್ಸಂಜೆ ಬಾನಿನಲ್ಲಿ ಕಂಡ ಕಪ್ಪು, ಬಿಳುಪು, ಕೆಂಪು ಮೋಡಗಳು ಸಹೃದಯಿಗಳ ಮನದೊಳಗಿನ ಬಣ್ಣ ಬಣ್ಣದ ಭಾವನೆಗಳನ್ನು ನೇವರಿಸಿದವು!
ಪ್ರಜಾವಾಣಿ ಚಿತ್ರ: ಬನೇಶ ಕುಲಕರ್ಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.