ಮೈಸೂರು: ಇಲ್ಲಿನ ದೇವರಾಜ ಅರಸು ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟರ್ ನಡುವೆ ಮಂಗಳವಾರ ನಡೆದ ಅಪಘಾತದಲ್ಲಿ ಸತ್ಯನಾರಾಯಣ ಶೆಟ್ಟಿ (70) ಎಂಬುವವರು ಮೃತಪಟ್ಟಿದ್ದಾರೆ.
ದೇವರಾಜ ಮೊಹಲ್ಲಾ ನಿವಾಸಿಯಾದ ಇವರು ತಮ್ಮ ಸ್ಕೂಟರ್ ನಲ್ಲಿ ಮಳಿಗೆ ತೆರೆಯಲು ಗಾಡಿ ಲಕ್ಕಣ್ಣ ರಸ್ತೆಯಲ್ಲಿ ಬಂದು ದೇವರಾಜ ಅರಸು ರಸ್ತೆಯನ್ನು ದಾಟುತ್ತಿದ್ದ ವೇಳೆ ಕೆ.ಆರ್.ವೃತ್ತದ ಕಡೆಯಿಂದ ಅರಸು ರಸ್ತೆಯಲ್ಲಿ ವೇಗವಾಗಿ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಬಂದ ಸವಾರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಕೆಳಗೆ ಬಿದ್ದ ಸತ್ಯನಾರಾಯಣಶೆಟ್ಟಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಬೈಕ್ ಸವಾರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.