ADVERTISEMENT

ಶಿಕ್ಷಕ‌ರಿಂದ ಸ್ವಸ್ಥ ಸಮಾಜ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:57 IST
Last Updated 16 ಸೆಪ್ಟೆಂಬರ್ 2021, 7:57 IST
ಪಾವಗಡದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ (ಕುಳಿತವರು ಎಡದಿಂದ ಬಲಕ್ಕೆ) ಶ್ರೀನಿವಾಸ್, ಧನಂಜಯ, ರಾಜಾನಾಯ್ಕ, ಬಸವರಾಜು, ತಿಪ್ಪೇಸ್ವಾಮಿ, ರೇಣುಕಾರಾಜ್, ಪಿ.ಒ.ರಾಮಾಂಜಿನಮ್ಮ, ನಾಗವೀಣಾ, ಚಂದ್ರಶೇಖರಯ್ಯ ಅವರನ್ನು ಅಭಿನಂದಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ, ರೋಟರಿ ಸಂಸ್ಥೆ ಕಾರ್ಯದರ್ಶಿ ಸತ್ಯ ಲೋಕೇಶ್‌, ಕಟ್ಟಾ ನರಸಿಂಹಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀಧರ್‌ ಗುಪ್ತ, ಪ್ರಾಂಶುಪಾಲ ಕೆ.ಒ.ಮಾರಪ್ಪ, ಮೊಹಮದ್‌ ಇಮ್ರಾನ್‌, ಎಂ.ಎಸ್.ವಿಶ್ವನಾಥ್‌ ಉಪಸ್ಥಿತರಿದ್ದರು
ಪಾವಗಡದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ (ಕುಳಿತವರು ಎಡದಿಂದ ಬಲಕ್ಕೆ) ಶ್ರೀನಿವಾಸ್, ಧನಂಜಯ, ರಾಜಾನಾಯ್ಕ, ಬಸವರಾಜು, ತಿಪ್ಪೇಸ್ವಾಮಿ, ರೇಣುಕಾರಾಜ್, ಪಿ.ಒ.ರಾಮಾಂಜಿನಮ್ಮ, ನಾಗವೀಣಾ, ಚಂದ್ರಶೇಖರಯ್ಯ ಅವರನ್ನು ಅಭಿನಂದಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ, ರೋಟರಿ ಸಂಸ್ಥೆ ಕಾರ್ಯದರ್ಶಿ ಸತ್ಯ ಲೋಕೇಶ್‌, ಕಟ್ಟಾ ನರಸಿಂಹಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀಧರ್‌ ಗುಪ್ತ, ಪ್ರಾಂಶುಪಾಲ ಕೆ.ಒ.ಮಾರಪ್ಪ, ಮೊಹಮದ್‌ ಇಮ್ರಾನ್‌, ಎಂ.ಎಸ್.ವಿಶ್ವನಾಥ್‌ ಉಪಸ್ಥಿತರಿದ್ದರು   

ಪಾವಗಡ: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ರೋಟರಿ ಸಂಸ್ಥೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ವಿದ್ಯಾರ್ಥಿಗಳು ಬಡತನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮೀರಿ ಸಾಧನೆ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಶಿಕ್ಷಕರು, ಪೋಷಕರ ಶ್ರಮವೂ ಕಾರಣ ಎಂದರು.

ADVERTISEMENT

ಯಾವುದೇ ಅರ್ಜಿ ಆಹ್ವಾನಿಸದೆ ತಾಲ್ಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಹೆಚ್ಚಿನ ಕಾರ್ಯ ನಿರ್ವಹಿಸಲು ಶಿಕ್ಷಕರಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಐ.ಎ.ನಾರಾಯಣಪ್ಪ, ರೋಟರಿ ಸಂಸ್ಥೆ ಕಾರ್ಯದರ್ಶಿ ಸತ್ಯ ಲೋಕೇಶ್‌, ಕಟ್ಟಾ ನರಸಿಂಹಮೂರ್ತಿ ಮಾತನಾಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀಧರ್‌ ಗುಪ್ತ, ಪ್ರಾಂಶುಪಾಲ ಕೆ.ಒ.ಮಾರಪ್ಪ, ಮೊಹಮ್ಮದ್ ಇಮ್ರಾನ್‌, ಎಂ.ಎಸ್.ವಿಶ್ವನಾಥ್‌, ಅಂತರಗಂಗೆ ಶಂಕರಪ್ಪ, ಗೊರ್ತಿ ನಾಗರಾಜು, ಕಮಲ್‌
ಬಾಬು, ಲೋಕೇಶ್‌, ಬುಡೇನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.