ADVERTISEMENT

ಸೈದಾಪುರ: ಮಹಿಳಾ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 5:43 IST
Last Updated 22 ಮಾರ್ಚ್ 2023, 5:43 IST
ಸೈದಾಪುರದ ವಿದ್ಯಾವರ್ಧಕ ಪ್ರೌಢಶಾಲೆ ಆವರಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಮಾತನಾಡಿದರು
ಸೈದಾಪುರದ ವಿದ್ಯಾವರ್ಧಕ ಪ್ರೌಢಶಾಲೆ ಆವರಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಮಾತನಾಡಿದರು   

ಸೈದಾಪುರ: ‘ಮಹಿಳೆಯರಲ್ಲಿ ದೇಶ ಮುನ್ನಡೆಸುವ ಶಕ್ತಿಯಿದೆ. ಹೆಣ್ಣು ಈ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಹೊಂದಿದ್ದಾಳೆ’ ಎಂದು ಚೈತ್ರಾ ಕುಂದಾಪುರ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ತರುಣ ಸಂಘ ಹಾಗೂ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೆಣ್ಣೆಂದರೆ ಕೇವಲ ಮಕ್ಕಳನ್ನು ನೀಡುವ ಯಂತ್ರವಲ್ಲ. ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಜಗತ್ತನ್ನೇ ಕಾಯುವವಳು. ಆಪತ್ತಿನ ಕಾಲದಲ್ಲಿ ಕುಟುಂಬವನ್ನು ಸಂರಕ್ಷಿಸುವುದು ಮಹಿಳೆಯರಿಗೆ ಮಾತ್ರ ಗೊತ್ತು. ಜಗತ್ತು ಎಷ್ಟೇ ಬದಲಾದರೂ ಕೂಡ ಭಾರತ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಎಲ್ಲರೂ ತಲೆ ಭಾಗುವಂತೆ ಮಾಡಿರುವುದು ಭಾರತದ ಸ್ರ್ತೀಯರು ಎಂಬುದು ನಾವು ಎಂದೂ ಮರೆಯಬಾರದು’ ಎಂದು ಹೇಳಿದರು.

ADVERTISEMENT

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ತರುಣ ಸಂಘದ ಅಧ್ಯಕ್ಷ ಭೀಮಣ್ಣ ಮಡಿವಾಳಕರ್, ಮಹಿಳಾ ಘಟಕದ ಅಧ್ಯಕ್ಷೆ ಕಮಲ.ಎಮ್ ಕುಲಕರ್ಣಿ, ಮುಖ್ಯಶಿಕ್ಷಕ ಲಿಂಗಾರೆಡ್ಡಿ.ಆರ್ ನಾಯಕ, ಪ್ರಾಶುಂಪಾಲ ಜಿ.ಎಮ್ ಗುರುಪ್ರಸಾದ, ವಕೀಲ ಭೀಮರೆಡ್ಡಿ ಶೆಟ್ಟಿಹಳ್ಳಿ, ಬಸ್ಸುಗೌಡ ಐರೆಡ್ಡಿ ಸೈದಾಪುರ, ಮುಕುಂದಕುಮಾರ ಅಲಿಝಾರ್, ಯೋಗೇಶ ಕುಮಾರ ದೋಕಾ, ಕೆ.ಬಿ. ರಾಘವೇಂದ್ರ, ಸಂತೋಷ ಬಾದಾಮಿ, ರಾಕೇಶ ಕುಮಾರ ದೋಕಾ, ಚಂದ್ರುಗೌಡ ಹೆಗ್ಗಣಗೇರಾ, ಮಲ್ಲರೆಡ್ಡಿ ಖಾನಾಪುರ, ಸಿದ್ದು ಪೂಜಾರಿ, ತಾಯಪ್ಪ ಬೊಮ್ಮಣ್ಣೋರ್, ಶಿವುಕುಮಾರ ಮುನಗಾಲ, ರಾಜೇಶ ದೇವರಶೆಟ್ಟಿ, ಬಸ್ಸು ಕಲಾಲ್ ಕೂಡ್ಲೂರ್ ಸೇರಿದಂತೆ ಮಹಿಳೆಯರು, ಯುವಕರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.