ಬೆಂಗಳೂರು: ಕೊರೊನಾ ವೈರಸ್ ಕುರಿತಂತೆ ಚಿತ್ರ ನಿರ್ದೇಶಕ ಯೋಗರಾಜ ಭಟ್ಟರು ಬರೆದಿರುವ ‘ತಿಳಿದುಕೊಳ್ಳುವ ಬನ್ನಿ ಕೊರೊನಾ’ ಹಾಡು ಶನಿವಾರ (ಮೇ 2) ಬಿಡುಗಡೆಯಾಗಿದೆ.
ಯೋಗರಾಜಭಟ್ಟರ ಸಾಹಿತ್ಯದ ಈ ಹಾಡನ್ನು ಗಾಯಕ ವಿಜಯಪ್ರಕಾಶ್ ಹಾಡಿದ್ದರೆ, ಸಂಗೀತ ನಿರ್ದೇಶಕ ಅರ್ಜುನ ಜನ್ಯ ಸಂಯೋಜಿಸಿದ್ದಾರೆ.
‘ ಈ ಸಂದರ್ಭದಲ್ಲಿ, ಭರವಸೆಯೊಂದೇ ಎಲ್ಲರಿಗೂ ಬೇಕಿರುವುದು. ಈ ಹಾಡಿನ ಮೂಲಕ ನಾವು ಭರವಸೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೇಳಿ ಆನಂದಿಸಿ. ಆರೋಗ್ಯವೇ ದೇಶದ ಸಂಪತ್ತು. ಮನೆಗಳಲ್ಲಿರಿ, ಸುರಕ್ಷಿತವಾಗಿರಿ,’ ಎಂದು ಈ ಹಾಡಿನೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೊ ವೀಕ್ಷಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.