ಕೋಲ್ಕತ್ತ: ‘ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಅವರು (54) ಕೋವಿಡ್ ವಿರುದ್ಧದ ಎರಡು ತಿಂಗಳ ಹೋರಾಟದ ಬಳಿಕ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ನಿಧನರಾದರು’ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಸುಭಂಕರ್ ಬ್ಯಾನರ್ಜಿ ಅವರಿಗೆ ಪತ್ನಿ, ಮಗ ಮತ್ತು ಮಗಳಿದ್ದಾರೆ. ಸುಭಂಕರ್ ಅವರ ಪಾರ್ಥಿವ ಶರೀರವನ್ನು ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಇರಿಸಲಾಗಿದ್ದು, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.
ಬ್ಯಾನರ್ಜಿ ಅವರನ್ನು ಜೂನ್ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಅವರಿಗೆ ಆಮ್ಲಜನಕದ ನೆರವು ನೀಡಲಾಗಿತ್ತು.
‘ನನಗೆ ಅವರು ಬಹಳ ನೆನಪಾಗುತ್ತಿದ್ದಾರೆ. ತಬಲಾ ಪ್ರಪಂಚ ಮತ್ತು ಭಾರತೀಯ ಸಂಗೀತ ಕ್ಷೇತ್ರ ಅವರನ್ನು ನೆನಪಿಸಿಕೊಳ್ಳಲಿದೆ’ ಎಂದು ಖ್ಯಾತ ತಬಲಾ ಕಲಾವಿದ ಜಾಕೀರ್ ಹುಸೇನ್ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರವು ಬ್ಯಾನರ್ಜಿ ಅವರಿಗೆ ಸಂಗೀತ್ ಸಮ್ಮಾನ್ ಮತ್ತು ಸಂಗೀತ್ ಮಹಾನ್ ಸಮ್ಮಾನ್ ನೀಡಿ ಗೌರವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.