ADVERTISEMENT

ಮಾವಿನ ಬೆಳೆ ರಕ್ಷಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 10:58 IST
Last Updated 9 ಜನವರಿ 2021, 10:58 IST
ಶ್ರೀನಿವಾಸಪುರ ತಾಲ್ಲೂಕಿನ ಇಮರಕುಂಟೆ ಗ್ರಾಮದ ಸಮೀಪ ತೋಟವೊಂದರ ಮಾವಿನ ಮರದಲ್ಲಿ ಬರುತ್ತಿರುವ ಹೂತೆನೆ.
ಶ್ರೀನಿವಾಸಪುರ ತಾಲ್ಲೂಕಿನ ಇಮರಕುಂಟೆ ಗ್ರಾಮದ ಸಮೀಪ ತೋಟವೊಂದರ ಮಾವಿನ ಮರದಲ್ಲಿ ಬರುತ್ತಿರುವ ಹೂತೆನೆ.   

ಶ್ರೀನಿವಾಸಪುರ: ಮಾವು ಬೆಳೆಗಾರರು ಮಾವಿನ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಮಾವಿನ ಫಸಲು ಪಡೆಯಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪ ನಿದರ್ೇಶಕ ಎಚ್.ಟಿ.ಬಾಲಕೃಷ್ಣ ಸಲಹೆ ಮಾಡಿದ್ದಾರೆ.

ಈಗ ಮಾವು ಹಂಗಾಮು ಪ್ರಾರಂಭವಾಗಿದೆ. ಮಾವು ಬೆಳೆಯುವ ಪ್ರದೇಶದಲ್ಲಿ ಹೂತೆನೆ ಹೊರಹೊಮ್ಮಿದ್ದು, ಕೆಲವು ಕಡೆ ಕಾಯಿ ಕಚ್ಚಿದೆ. ಆದರೆ ರಾಜ್ಯಾದ್ಯಂತ ವಾತಾವರನ ವೈಪರೀತ್ಯ ಉಂಟಾಗಿದೆ. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಮಾವಿನ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಹೂ ಕಪ್ಪಾಗುವುದನ್ನು ತಪ್ಪಿಸಲು, ಬೂದಿರೋಗದಿಂದ ಪಾರುಮಾಡಲು, ಹಾಗೂ ಒಣಗದಂತಿರಲು ರೈತರು ಸಿಲೀಂದ್ರ ನಾಶಕ ಸಿಂಪಡಣೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾವಿನ ಹೂ ರಕ್ಷಣೆಗೆ ಹೆಕ್ಸಾಕೋನ್ಜೋಲ್2.0 ಮಿ.ಲೀ (5%ಇಸಿ) ಅಥವಾ ಥಯೋಫಿನೆಟ್ ಮಿಥೈಲ್ 1 ಗ್ರಾಂ (70%ಡಬ್ಲ್ಯುಪಿ) ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.

ADVERTISEMENT

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಅಧಿಕಾರಿಗಳು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪಕರ್ಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.