ADVERTISEMENT

ಮಕ್ಕಳ ಸರ್ಕಸ್ ಕಂಪೆನಿ

ಚಂದ ಪದ್ಯ

ಶಿವನಾಪುರ ನರಸಿಂಹಮೂರ್ತಿ
Published 12 ಜನವರಿ 2013, 19:59 IST
Last Updated 12 ಜನವರಿ 2013, 19:59 IST
ಮಕ್ಕಳ ಸರ್ಕಸ್ ಕಂಪೆನಿ
ಮಕ್ಕಳ ಸರ್ಕಸ್ ಕಂಪೆನಿ   

ಸರ್ಕಸ್ ಕಂಪೆನಿ ಮಾಡಲು
ಪುಟ್ಟ ಮನಸು ಮಾಡಿದ್ದ
ದೊಡ್ಡ ಚಾವುಟಿ ಹಿಡಿದು
ರಿಂಗ್ ಮಾಸ್ಟರ್ ತಾನೆ ಆಗಿದ್ದ

ಅವನ ಗೆಳೆಯ ರಮೇಶ
ಹುಲಿಯ ವೇಷ ಧರಿಸಿರಲು
ಭೀಮನ ಹೆಸರಿನ ಬಾಲಕ
ಆನೆಯ ಹಾಗೆ ನಡೆದಿರಲು
ಕರಡಿಯ ವೇಷ ಹಾಕಲು
ಬೇಗನೆ ಒಪ್ಪಿದ ಶಾಮ
ಒಂಟೆಯ ಹಾಗೆ ಕಂಡ
ಎತ್ತರವಿದ್ದ ರಾಮ

ತರಗತಿಗೆ ಮೊದಲಿದ್ದ
ಕಿಲಾಡಿ ಸೋಮನ ಹೆಸರು
ನರಿಯ ಬಟ್ಟೆ ತೊಡಲು
ಎಲ್ಲರೂ ಒಪ್ಪಿಕೊಂಡರು
ಸದಾ ಜಗಳ ತೆಗೆಯುವ
ರವಿಯು ಮೀಸೆ ತೀಡಿದ
ತಾನೇ ಸಿಂಹವು ಎಂದು
ದೊಡ್ಡ ಕೂಗು ಹಾಕಿದ

ADVERTISEMENT

ಚೀಟಿ ಕೊಡುವ ಕೆಲಸಕ್ಕೆ
ಕನ್ನಡ ಮಾಸ್ತರು ನಿಂತರು
ಹಣವ ಎಣಿಸಿ ನೋಡಲು
ಗಣಿತದ ಮಾಸ್ತರು ಬಂದರು
ಪ್ರಾಣಿ ವೇಷದ ಎಲ್ಲರು
ಬಂದರು ವೃತ್ತದ ರೀತಿ
ಕನ್ನಡ ಮಾಸ್ತರ ಸಂಗೀತ
ಹಲವು ರಾಗದ ಖ್ಯಾತಿ

ಮುಖ್ಯ ಗುರುಗಳು ಬಂದು
ಸರ್ಕಸ್ ಪ್ರಾರಂಭವಾಯ್ತು
ಮಕ್ಕಳ ಸರ್ಕಸ್ ಕಂಪೆನಿ
ಎಂದು ಎಲ್ಲೆಡೆ ಹೆಸರಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.