ADVERTISEMENT

ವಿಲೇವಾರಿ

ಕವಿತೆ

ಡಾ.ಶ್ರೀಕಂಠ ಕೂಡಿಗೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST
ವಿಲೇವಾರಿ
ವಿಲೇವಾರಿ   

ವಿಲೇವಾರಿಗಿದೆ ಈ ಮನೆ

ರೀಪು ಪಕಾಸಿ ಹಿರಿದ
ಹಲವು ಕಂಬದ ಈ ಹಳೆಮನೆ
ಆರು ದಶಕಗಳ ಹಿಂದೆ ಇತ್ತು
ಅದರದೇ ಆದ ಗೈರತ್ತು
ಗಾಳಿ ಬೆಳಕಿಗೆ ಸದಾ ತೆರೆದಮನೆ
ಮೂಲೆ ಮೂಲೆಗಳಲ್ಲಿ
ಗಂಧವತಿ ಪೃಥ್ವಿಯ ಹೊಸ ಹವೆ

ಅಜ್ಜ ಹೊರಟು ಹೋದ
ಮುಚ್ಚುತ್ತಾ ಬಂತು ಒಂದೊಂದು ಕಿಟಕಿ ಬಾಗಿಲು
ಉಳಿದವು ಕೆಲವೇ ಲೆಕ್ಕಕ್ಕೆ
ಮೊಮ್ಮಗನ ಕಾಲಕ್ಕೆ
ಬರುಬರುತ್ತಾ
ಒಳಗೆ ಗವ್ವೆನ್ನುವ ಕತ್ತಲು
ಕಾಗೆ ಗೂಗೆಗಳ ಆವಾಸಸ್ಥಾನ

ADVERTISEMENT

ಅನಾದಿಯ ದೈದೀಪ್ಯಮಾನ ದೀಪ
ಎಣ್ಣೆಬತ್ತಿಯ ಕೊರತೆಯಲ್ಲಿ ಕ್ಷೀಣ
ಒಮ್ಮೆಲೆ
ಬಾಗಿಲು ಮುರಿದು ಬಿರುಗಾಳಿ ಒಳ ನುಗ್ಗಿತು
ತತ್ತರಿಸಿದ ಅಜ್ಜನ ಆತ್ಮ ಹೇಳಿತು
ವ್ಯರ್ಥ ಈ ಹೊತ್ತಿನ (ಪ್ರಜಾ) ಪ್ರಭುತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.