
ಪ್ರಜಾವಾಣಿ ವಾರ್ತೆಕಾಡಿನಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಿಂಹವೊಂದು ಎದುರಾಯಿತು. ಸಿಂಹದ ಹೊಟ್ಟೆ ತುಂಬಿದ್ದ ಕಾರಣ ಅದು ಅವನನ್ನು ನೋಡಿ ಘರ್ಜಿಸಲಿಲ್ಲ. ಅವನೊಂದಿಗೆ ನಡೆದು ಬಂದ ಅದು ನಿಧಾನವಾಗಿ ಅವನನ್ನು ಮಾತಿಗೆಳೆಯಿತು. ಆ ವ್ಯಕ್ತಿಗೂ ಕಾಡಿನಲ್ಲಿ ಒಂಟಿ ಎನಿಸುತ್ತಿತ್ತು. ಇದೀಗ ಸಿಂಹದ ಜೊತೆ ಸಿಕ್ಕಿತ್ತು.
ಅವರಿಬ್ಬರೂ ಕೊಂಚ ದೂರ ನಡೆದು ಬಂದರು. ಅಲ್ಲೊಂದು ದೊಡ್ಡ ಪ್ರತಿಮೆ ಇತ್ತು. ಅದರಲ್ಲಿ ಸಿಂಹವನ್ನು ಕೊಲ್ಲುತ್ತಿರುವ ಮನುಷ್ಯನನ್ನು ಕೆತ್ತಲಾಗಿತ್ತು. ಅದನ್ನು ತೋರಿಸುತ್ತಾ ಆ ವ್ಯಕ್ತಿ ಗತ್ತಿನಲ್ಲಿ `ನೋಡು, ನಾವು ಮನುಷ್ಯರು ಸಿಂಹಗಳನ್ನು ಹೇಗೆ ಕೊಂದಿದ್ದೇವೆ~ ಎಂದ.
ಆಗ ಸಿಂಹ ನಗುತ್ತಾ, `ನಮಗೆ ಪ್ರತಿಮೆಗಳನ್ನು ಕೆತ್ತಲು ಸಾಧ್ಯವಿದ್ದಿದ್ದರೆ ಮನುಷ್ಯನನ್ನು ಸೀಳುವ ಸಿಂಹಗಳನ್ನು ಕೆತ್ತುತ್ತಿದ್ದೆವು~ ಎಂದಿತು.
ತನ್ನ ಕೆಳಮಟ್ಟದ ಆಲೋಚನೆಗೆ ಆ ವ್ಯಕ್ತಿ ನಾಚಿ ತಲೆತಗ್ಗಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.