ಕುವೆಂಪು
ಕಲ್ಗತ್ತಲೆ
ಕಲ್ಗತ್ತಲೆ (ನಾ). ಗಾಢ ಕತ್ತಲೆ
ಕುವೆಂಪು ಅವರು ಅರ್ಜುನನು ತನ್ನ ಸಖಿ ಚಿತ್ರಾಂಗದೆಯಿಂದ ಅಗಲುವ ರಾತ್ರಿ ದಟ್ಟ ಮೋಡ ಕವಿದು ಪೂರ್ಣ ಕತ್ತಲಾಗಿದ್ದುದನ್ನು ಚಿತ್ರಿಸಲು ‘ಕಲ್ಗತ್ತಲೆ’ ಪದ ರೂಪಿಸಿ ಪ್ರಯೋಗಿಸಿದ್ದಾರೆ. ಅದು ಮುಳ್ಳು ಮೊನೆಯು ಹತ್ತದಷ್ಟು ಗಾಢವಾಗಿತ್ತು.
‘ಮುಳ್ಳುಮೊನೆಗೆಡೆಯಿಲ್ಲದಂದದಿ ಧರಿತ್ರಿಯಂ
ತೀವಿರ್ದುದಿರಿವ ಕಲ್ಗತ್ತಲೆ.’
ಸುದ್ದಿಬೆಂತರ
ಸುದ್ದಿಬೆಂತರ (ನಾ). ಸಮಾಚಾರ ಪಿಶಾಚಿ; ವಾರ್ತಾಭೂತ
ರಾವಣನು ಸೀತೆಯನ್ನು ಹೊತ್ತು ತಂದು ಅಶೋಕವನದಲ್ಲಿಟ್ಟಿರುವ ವಾರ್ತೆ ಹಬ್ಬಿದ ಬಗೆಯನ್ನು ‘ಸುದ್ದಿಬೆಂತರ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:
‘ಸುಯ್ಗಾಳಿಯಾಗಿ ಕಿವಿಯಿಂ
ಕಿವಿಗೆ ಸುಳಿದುದು ಸುದ್ದಿ ಬೆಂತರಂ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.