ಕುವೆಂಪು
ಕೂರ್ಗೆಲಸ
ಕೂರ್ಗೆಲಸ (ನಾ). ಕ್ರೂರವಾದ ಕೆಲಸ; ಕೆಟ್ಟಕೆಲಸ (ಕೂರ್ + ಕೆಲಸ)
ಕೈಕೆಯ ತಂದೆ ಕೇಕೆಯ ಮಹಾರಾಜನು ಒಂದು ದಿನ ಬೇಟೆಯ ಕ್ರೂರವಾದ ಕೆಲಸದಿಂದ ಹಿಂತಿರುಗುತ್ತಿರುತ್ತಾನೆ. ಅದನ್ನು ಕವಿ ‘ಕೂರ್ಗೆಲಸ’ ಎಂಬ ಪದ ರೂಪಿಸಿ ಚಿತ್ರಿಸಿದ್ದಾರೆ. ಆ ಕೆಟ್ಟ ಕೆಲಸದಿಂದ ಹಿಂತಿರುಗಿ ಬರುವಾಗ ಅನಾಥ ಶಿಶುರೋದನ ಕೇಳಿ ಅವನಲ್ಲಿ ಕರುಣೆ ಉಂಟಾಗುತ್ತದೆ.
ಪಳುವೆ ತಾನಳುವಂತೆ
ಗೋಳಿಟ್ಟುದೊಂದು ಶಿಶುರೋದನಂ. ಕೂರ್ಗೆಲಸದಿಂ
ಪಿಂತಿರುಗುತಿರ್ದ ಪಾರ್ಥಿವನೊಳುದಿಸಿತು ಕರುಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.