ಕಾದಂಬರಿ: ತಥಾಗತ
ಕಾದಂಬರಿಕಾರ: ಸಂಪನ್ನ ವಿ.ಮುತಾಲಿಕ
ಪ್ರಕಾಶನ: ಸಾಹಿತ್ಯ ಪ್ರಕಾಶನ
ಪುಟಗಳು: 349
ದರ: ₹ 350
ಪ್ರಾಚೀನ ಮತ್ತು ಆಧುನಿಕ ಸಂದರ್ಭಗಳಲ್ಲಿ ನಡೆಯುವ ಧಾರ್ಮಿಕ, ಆಧ್ಯಾತ್ಮಿಕ ಚರ್ಚೆಗಳಲ್ಲಿ ಹೊರ ಹೊಮ್ಮುವ ಹೊಸ ನೋಟಗಳನ್ನು ಈ ಕಾದಂಬರಿ ನೀಡುತ್ತದೆ.
ಮೂರು ಖಂಡಗಳಲ್ಲಿ ಕಥೆಯು ರೂಪುಗೊಂಡಿದ್ದು, ಹೊಯ್ಸಳರ ಕಾಲದಲ್ಲಿ ಬರುವ ಪೂರ್ಣಾನಂದರು , ಅವರ ಮಗ ವರದರಾಜ, ಜೈನ ಸೈನ್ಯಾಧಿಕಾರಿಯಾದ ಭರತೇಶ್ವರನ ಮಗಳು ಯಶೋದಾ, ಜೈನ ಸನ್ಯಾಸಿ ಜಿನದತ್ತ, ಮಾತು ಕಡಿಮೆಯಾದರೂ ಕೇವಲ ತನ್ನ ನಿಲುವಿನಲ್ಲಿಯೇ ಗಮನ ಸೆಳೆಯುವ ಪೂರ್ಣಾನಂದರ ಮಡದಿ ನೀಳಾದೇವಿ ಈ ಖಂಡದಲ್ಲಿ ಬರುವ ಪ್ರಮುಖ ಪಾತ್ರಗಳು
ಎರಡನೇಯ ಖಂಡದಲ್ಲಿ ಆಧುನಿಕ ಕಾಲಘಟ್ಟವನ್ನು ಚಿತ್ರಿಸಲಾಗಿದೆ. ಮೂರನೇ ಖಂಡವು ಎರಡನೇ ಖಂಡದ ಮುಂದುವರಿದ ಭಾಗವೇನೋ ಎಂದು ಅನಿಸುತ್ತದೆ. ವರ್ಣವು ಜಾತಿಯಾಗಿ ಮಾರ್ಪಾಡಾದ ಸಂಗತಿಯನ್ನು ಈ ಪುಸ್ತಕ ಹೇಳುತ್ತದೆ. ಜತೆಗೆ ಧರ್ಮ ಮತ್ತು ವರ್ಣಗಳ ಕುರಿತು ಜೀವನ ದರ್ಶನ ನೀಡುವ ಕಾದಂಬರಿ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.