ADVERTISEMENT

ಗಣಪತಿಗೆ ಗಜಮುಖ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಲೆ: ವಿಜಯಕುಮಾರಿ ಆರ್.
ಕಲೆ: ವಿಜಯಕುಮಾರಿ ಆರ್.   

ಶಿವನ ಸತಿ ಪಾರ್ವತಿಯು
ಸ್ನಾನ ಮಾಡಲು ಹೊರಟಿರಲು
ಮನದಿ ಮೂಡಿತು ಚಿಂತೆಯು
ಯಾರು ಕಾಯುವರು ಬಾಗಿಲು

ಮೈಯ ಮಣ್ಣಲಿ ಮೂರ್ತಿ ಮಾಡಿ
ಜೀವವ ತುಂಬಿ ಕಾವಲಿಟ್ಟಳು
ಯಾರೇ ಬಂದರೂ ಬಿಡದಂತೆ
ಕಟ್ಟುನಿಟ್ಟಿನ ಆಜ್ಞೆಯಿತ್ತಳು

ಬಾಗಿಲು ಬಳಿ ಬಂದ ಶಿವನು
ಪುಟ್ಟ ಬಾಲಕನ ಕಂಡನು
ಯಾರು ನೀನು ದಾರಿಬಿಡು
ಎನ್ನುತ ಕೋಪಗೊಂಡನು

ADVERTISEMENT

ತಾಯಿಮಾತಿಗೆ ಬದ್ಧನಾಗಿಹೆನು
ಯಾರನ್ನೂ ಒಳಗೆ ಬಿಡಲಾರೆ
ಅಡ್ಡಗಟ್ಟಿ ನಿಲ್ಲುತ ಹೇಳಿದ
ಬನ್ನಿ ನೋಡುವೆ ಧೈರ್ಯವಿದ್ದರೆ

ಬಿಡದೆ ಇರಲು ಯುದ್ಧವಾಗಿ
ಮಾತಿಗೆ ಮಾತು ಬೆಳೆಯಿತು
ಶಿವನ ಕೋಪ ಹೆಚ್ಚಾಗಿ
ಬಾಲಕನ ತಲೆಯೇ ಹೋಯಿತು

ಪೂಜೆಯ ಮಾಡಲು ಅಣಿಯಾಗಿ
ಪಾರ್ವತಿ ಬಂದಳು ಹರುಷದಲಿ
ಮಗುವಿನ ದೇಹದ ರೂಪವ ಕಂಡು
ಕುಸಿದಳು ನೆಲಕೆ ದುಃಖದಲಿ

ಬೇಡಿಕೊಂಡಳು ಶಿವನನ್ನು
ಬದುಕಿಸುವಂತೆ ಮಗನನ್ನು
ಸತಿಯ ಸಂಕಟ ತಾಳಲಾರದೆ
ದೂತರ ಕರೆದನು ತಡಮಾಡದೆ

ಉತ್ತರ ದಿಕ್ಕಿಗೆ ಮಲಗಿರುವ
ಪ್ರಾಣಿಯ ತಲೆಯನ್ನು ತನ್ನಿರಿ
ಹುಡುಕುತ ಹೋದ ದೂತರು
ಆನೆಯ ತಲೆಯ ತಂದರು

ಬಾಲಕನಿಗೆ ಆನೆಯ ತಲೆಯನ್ನು
ಜೋಡಿಸಿ ಜೀವವ ನೀಡಿದ ಶಿವನು
ಉದ್ದ ಸೊಂಡಿಲಿನ ಅಗಲ ಕಿವಿಯ
ಗಜಮುಖನಾದನು ಗಣಪತಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.