ADVERTISEMENT

ಬೇಡ ಮಕ್ಕಳೆ ಬೇಸರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:30 IST
Last Updated 3 ಆಗಸ್ಟ್ 2019, 19:30 IST
ಕಲೆ: ಶಿಲ್ಪಾ ಕಬ್ಬಿಣಕಂತಿ
ಕಲೆ: ಶಿಲ್ಪಾ ಕಬ್ಬಿಣಕಂತಿ   

ಬಿಡುವು ಶಾಲೆಗೆ, ರಜೆಯ ಮಜವು

ಗಡುವು ಇರದು ಸಮಯಕೆ

ಬೀಡುಬಿಟ್ಟರೆ ಗೆಳೆಯರೊಂದಿಗೆ

ADVERTISEMENT

ಬೇಡವೆನುವಿರಿ ಊಟಕೆ

ಊರು, ಕೇರಿ, ಜಾತ್ರೆ, ಉತ್ಸವ

ಸೇರಿ ಸುತ್ತಿದ ಸಂಭ್ರಮ

ಮರೆಯಲಾಗದು ನೋಡಿದೆಲ್ಲವ

ಇರಲಿ ನೆನಪಿನ ಸಂಗಮ

ರಜೆಯು ಮುಗಿದು, ಶಾಲೆ ತೆರೆಯಲು

ಬೇಡ ಮಕ್ಕಳೆ ಬೇಸರ

ಪ್ರಜೆಗಳೆಲ್ಲರೂ ಪಡೆಯಬೇಕು

ವಿದ್ಯೆ ಜ್ಞಾನಕೆ ಆಗರ

ಪ್ರೀತಿಯಿಂದಲಿ ಪಾಠ ಕಲಿಸಲು

ಗುರುಗಳೆಲ್ಲರಿಗಾತುರ

ಮಮತೆ ತೋರುತ, ತಪ್ಪು ತಿದ್ದುತ

ನೀತಿ ಕಲಿಸುವ ಕಾತರ

ಆಟ-ಪಾಠವು, ಕುಶಲಕಲೆಗಳು

ಉಂಟು ಗದ್ಯವು, ಪದ್ಯವು

ಇಷ್ಟದಿಂದಲಿ ಕಲಿಯಲೆಲ್ಲವೂ

ಕಷ್ಟವೆಂದಿಗೂ ಅನಿಸದು

ಹಂಚಿಕೊಳ್ಳಿರಿ ಗೆಳೆಯರೆಲ್ಲರೂ

ಬಿಚ್ಚಿ ನೆನಪಿನ ಸಂಚಯ

ಇಚ್ಛೆಯಿಂದಲಿ ಓದಿಕೊಳ್ಳಿರಿ

ಮೆಚ್ಚಿಕೊಳುವರು ಮಾಸ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.