ADVERTISEMENT

ಕವಿತೆ | ಪರಮೋಚ್ಚ ಉದಾಸೀನತೆ 

ವಸುಂಧರಾ ಕದಲೂರು
Published 24 ಡಿಸೆಂಬರ್ 2022, 19:30 IST
Last Updated 24 ಡಿಸೆಂಬರ್ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಆನೆ ಯೋಚಿಸಿರಬಹುದೆ
ಇರುವೆಯ ಬಗ್ಗೆ
ದಿಟ್ಟಿಸಿ ನೋಡಿದರಷ್ಟೇ
ಕಣ್ಣಿಗೆ ಬೀಳುವಪಾಪದ
ಜೀವಿಯನದು
ಉಪೇಕ್ಷಿಸಿರಬಹುದು
ಹೋಲಿಸಿ, ಗಾತ್ರ ನೋಡಿ

ನಕ್ಕಿರಬಹುದುಅಥವಾ
ಮುದ್ದುಕ್ಕಿಗೆಳೆತನ
ಬೆಳೆಸಿರಬಹುದು.ಈ ನಡುವೆ
ಆನೆಯ ಕಷ್ಟ ಇರುವೆಯ
ನಷ್ಟ ಇಬ್ಬರಮಾತುಕತೆಗೆ
ವಿಷಯವಾಗಿರಬಹುದು

ಇರುವೆ! ಅದೊಂದುಜೀವ
ಎಂದೂ ಗಣಿಸದೆ ‘ಅದೆಷ್ಟು
ಸಲಹೊಸಕಿ ಗೂಡಿಗೆನೀರು
ಹೋಯ್ದು ಗೋಳುಗರೆದಿಲ್ಲ
ನಾನು!
ಇನ್ನು ಆನೆ ಬಿಟ್ಟೀತೆ?!’

ADVERTISEMENT

ಭಂಡು ನುಡಿವೆ
ತನ್ನೊಂದು ಹೆಜ್ಜೆಯಡಿಗೆ
ಸಿಲುಕಿಅಪ್ಪಚ್ಚಿಯಾದ ಇರುವೆಗಳ
ಲೆಕ್ಕ ಇಟ್ಟಿರಲಾರದು;ಗುಡಿಸಿ
ಗುಡ್ಡೆ ಹಾಕಿದರೆ ತನ್ನಗಾತ್ರವೂ
ಆಗಲಾರದ ಪೊಳ್ಳು ಕಳೆಬರಗಳು
ಸೊಯ್ಯನೆದೂಳ ಕಣವಾಗಿ
ಹೋಯ್ತೆಂದುಹಂಗಿಸದೇ
ಬಿಟ್ಟೀತೆ ಎಂದುವ್ಯಂಗ್ಯಿಸುತ್ತೇನೆ

ನನ್ನ ಕೊಲೆಯಕೆಲಸಗಳಿಗೆ
ದೈತ್ಯನಹಿಂದೆ ಮರೆಯಾಗುತ್ತೇನೆ
ಪ್ರತೀ ಹೊಲೆ ಕೆಲಸಗಳಿಗೂಸಬೂಬು
ಹೇಳಿ,ಕೊಲೆಹೊಲೆಗೆಹೊಸ
ಕಸುಬುದಾರರಹುಡುಕುತೇನೆ

ಆನೆಯಷ್ಟೇನೂಬಲಶಾಲಿಯಲ್ಲದ
ಇರುವೆಯಬಲನಂಬಲುಸಿದ್ಧವಿಲ್ಲದ
ನಾನು
ಸಮಯ ಸಿಕ್ಕಾಗಲೆಲ್ಲಾತುಳಿಯುತಾ
ಹೊಸಕುತಾಓಡಾಡುವಾಗಸರೀ
ಉರಿ ತಾಕುವಂತೆ ಇರಿವ
ಇರುವೆಗಳಇರುವಿಕೆಗೆಪರಮೋಚ್ಚ
ಉದಾಸೀನತೆ ತೋರುತೇನೆ
ಸಾಮಾನ್ಯ ಮನುಷ್ಯರಂತೆ….

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.