ಸುಟ್ಟುಬಿಡಬೇಕು
ಎಲ್ಲರನ್ನೂ, ಇಲ್ಲಿರುವ ಎಲ್ಲರನ್ನು !
ಸಿಂಧೂವಿನಿಂದ ಹಿಡಿದು
ಕನ್ಯಾಕುಮಾರಿಯವರೆಗೂ
ಕೊಂದುಬಿಡಬೇಕು!
ಈಗಾ ಗಾಂಧೀಯಿಲ್ಲ
ಯುದ್ಧವೊಂದೆ ಗಾಂಧೀ ಎನ್ನಬೇಕು!
ಚಳಿಗಾಲದಲ್ಲಿ ಬಟ್ಟೆ ತೊಡದೆ
ಕೊರಗಿದ ಮೈಯಿಗೆ
ಶಾಂತಿಯೆಂಬ ಬಿಳಿಯ ಕವಚವ ತೊಟ್ಟು,
ಮಳೆಗಾಲದಲ್ಲಿ ಹಸಿರೆಂಬ
ವಸಂತವ ಮಡಿಲಲ್ಲಿ ಉಟ್ಟು,
ಬೇಸಿಗೆಯಲ್ಲಿ ಬೇಸತ್ತು ಕೇಸರಿಯ
ದುರಿತ ಕಾಲವನ್ನು ನಿರಾಕರಿಸಿದ ಗಾಂಧೀಗೆ
ಈಗಾ ಯುದ್ಧ ಬೇಕಾಗಿದೆ !
ಜಪಾನ್, ಜರ್ಮನಿ, ಕೊರಿಯ
ಚೀನಾ, ಅಮೇರಿಕಾದಂತಹ ರಾಷ್ಟ್ರಗಳು
ಭಾರತದ ಗತಿಯ ನೋಡಿ
ಗಾಂಧೀಯ ನಿರಾಕರಿಸಬೇಕಾಗಿದೆ!
ಗಾಂಧೀಯನ್ನು ಕೊಂದು
ವೀರಾವೇಶದಿಂದ ಭಾರತದಲ್ಲಿ ನಡೆದವರಿಗೆ
ಗಾಂಧೀಯ ಯುದ್ಧ ಬೇಕಾಗಿದೆ!
ಗಾಂಧೀ ಯುದ್ಧವೆಂದರೆ
ಬಂದೂಕುಗಳಿಂದ ಸುಡುವುದಲ್ಲ!
ಗಾಂಧೀ ಯುದ್ಧವೆಂದರೆ
ಪ್ರಾಣಿಗಳಿಗೆ ತಿವಿಯುವಂತೆ ತಿವಿಯುವುದಲ್ಲ!
ಧರ್ಮದ ಬೀಜ ಬಿತ್ತಿ
ಅಂಧದ ಹೊಲದಲ್ಲಿ ಬಿಟ್ಟು
ಕೇಕೆಯಾಡುವುದಲ್ಲ!
ಗಾಂಧೀಯ ಯುದ್ಧವೆಂದರೆ ಇಷ್ಚೇ,
ಪ್ರೀತಿಯಿಂದ ಕೊಲ್ಲಬೇಕು,
ಅಹಿಂಸೆಯಿಂದ ಕೊಲ್ಲಬೇಕು,
ಸತ್ಯಾಗ್ರಹದಿಂದ ಕೊಲ್ಲಬೇಕು,
ಅಸಹಕಾರದಿಂದ ಕೊಲ್ಲಬೇಕು,
ಕೊಲ್ಲುವುದಾದರೆ ಇವುಗಳಿಂದ ಕೊಲ್ಲಿ!
ಅಂಧಕಾರ ಅಜ್ಞಾನ ಅಸೂಯೆ ದ್ವೇಷವನ್ನು
ಕರುಣೆಯಿಂದ ಸುಟ್ಟು ಸಹನೆಯಿಂದ ಕೊಲ್ಲಿ,
ಯುದ್ಧ ಮಾಡಬೇಕೆಂದರೆ
ಪ್ರೀತಿಯಿಂದ ಯುದ್ಧ ಮಾಡಿ !
ಅಲ್ಲಿ ಯಾವಾಗಲೂ,
ಪ್ರತಿಯೊಬ್ಬರಲ್ಲೂ
ಗಾಂಧೀ ಇರುತ್ತಾನೆ!
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.