
ಚಿತ್ರ:ಎಐ
ರುದ್ರಾಕ್ಷಿಯನ್ನು ಶಿವನ ಅಂಶವೆಂದು ಹೇಳಲಾಗುತ್ತದೆ. ರುದ್ರಾಕ್ಷಿ ಅಸಾಧಾರಣ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದೆ. ಹಾಗಿದ್ದರೆ ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆಗುವ ಲಾಭಗಳು ಏನು ಎಂಬುದನ್ನು ನೋಡೋಣ.
ಪುರಾಣ ಕಥೆಗಳ ಪ್ರಕಾರ, ಸತಿ ತನ್ನ ದೇಹ ತ್ಯಾಗ ಮಾಡಿದಾಗ ಕೋಪಗೊಂಡ ಶಿವನು ನರ್ತನ ಮಾಡುವಾಗ ಕಣ್ಣೀರಿನ ಹನಿಗಳು ಭೂಮಿ ಮೇಲೆ ಬಿದ್ದು ರುದ್ರಾಕ್ಷಿಯಾಯಿತು ಎಂಬ ನಂಬಿಕೆ ಇದೆ.
ರುದ್ರಾಕ್ಷಿ ಮಾಲೆ ಧರಿಸುವುದರಿಂದಾಗುವ ಲಾಭಗಳು:
ರುದ್ರಾಕ್ಷಿ ಧರಿಸುವುದರಿಂದ ವ್ಯಕ್ತಿಯ ಜನ್ಮಕುಂಡಲಿಯಲ್ಲಿರುವ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ರುದ್ರಾಕ್ಷಿ ಧರಿಸುವವರನ್ನು ಶಿವ ರಕ್ಷಿಸುತ್ತಾನೆ. ಅವರ ಕಷ್ಟಗಳು ದೂರ ಮಾಡುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ.
ರುದ್ರಾಕ್ಷಿ ಧರಿಸುವುದರಿಂದ ಶಿವನ ಕೃಪೆ ದೊರೆಯುತ್ತದೆ. ರುದ್ರಾಕ್ಷಿ ಜಪಮಾಲೆ ಎಣಿಸುವುದರಿಂದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಎಂದು ಜನಪದರಲ್ಲಿ ನಂಬಿಕೆ ಇದೆ.
ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ರುದ್ರಾಕ್ಷಿ ಧರಿಸುವಾಗ ಶಾಸ್ತ್ರಾನುಸಾರ ಹಾಗೂ ನಕ್ಷತ್ರಕ್ಕೆ ಅನುಗುಣಾಗಿ ಸೂಕ್ತ ಜ್ಯೋತಿಷಿಗಳ ಸಲಹೆ ಪಡೆದು ಧರಿಸುವುದರಿಂದು ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.